ವಲಸೆ ಕಾರ್ಮಿಕರ ಓಡಾಟಕ್ಕೆ ಸಂಚಾರ ಆರಂಭಿಸಿದ ಕೆಎಸ್ಸಾರ್ಟಿಸಿ ಬಸ್ಸುಗಳು - Karavali Times ವಲಸೆ ಕಾರ್ಮಿಕರ ಓಡಾಟಕ್ಕೆ ಸಂಚಾರ ಆರಂಭಿಸಿದ ಕೆಎಸ್ಸಾರ್ಟಿಸಿ ಬಸ್ಸುಗಳು - Karavali Times

728x90

25 April 2020

ವಲಸೆ ಕಾರ್ಮಿಕರ ಓಡಾಟಕ್ಕೆ ಸಂಚಾರ ಆರಂಭಿಸಿದ ಕೆಎಸ್ಸಾರ್ಟಿಸಿ ಬಸ್ಸುಗಳು



ಬೆಂಗಳೂರು (ಕರಾವಳಿ ಟೈಮ್ಸ್) : 6 ಜಿಲ್ಲೆಗಳಲ್ಲಿ ಕಾರ್ಮಿಕರ ಓಡಾಟಕ್ಕೆ ಕೆಎಸ್‍ಆರ್‍ಟಿಸಿಯ 137 ಬಸ್ಸುಗಳು ರಸ್ತೆಗೆ ಇಳಿದಿದೆ. 56 ಸೀಟುಗಳ ಈ ಬಸ್ಸಿನಲ್ಲಿ 21 ಕಾರ್ಮಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿ ಸಿಕ್ಕಿದೆ. ಕಾರ್ಮಿಕರು ಸೀಟು ಖಾಲಿ ಬಿಟ್ಟು ಕೂರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ಬಸ್ಸುಗಳು ಲಾಕ್‍ಡೌನ್‍ನಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರಿಗಾಗಿ ಮಾತ್ರ ಎಂದು ಕೆಎಸ್‍ಆರ್‍ಟಿಸಿ ಸ್ಪಷ್ಟಪಡಿಸಿದೆ. ಈ ಬಸ್ಸುಗಳು ಜಿಲ್ಲಾ ವ್ಯಾಪ್ತಿಯ ಒಳಗಡೆ ಮಾತ್ರ ಸಂಚರಿಸುತ್ತದೆ. ಜಿಲ್ಲಾಡಳಿತದ ಮನವಿಯ ಹಿನ್ನೆಲೆಯಲ್ಲಿ ಈ ಬಸ್ಸುಗಳು ರಸ್ತೆಗೆ ಇಳಿದಿದ್ದು, ಬೆಂಗಳೂರಿನಿಂದ ಯಾವುದೇ ಬಸ್ಸುಗಳ ಸಂಚಾರ ಇರುವುದಿಲ್ಲ.

ಮಂಗಳೂರು 50, ಚಿಕ್ಕಮಗಳೂರು 43, ಪುತ್ತೂರು 28, ಶಿವಮೊಗ್ಗ 11, ತುಮಕೂರು 3, ಹಾಸನ ವಿಭಾಗದ 2 ಬಸ್ಸುಗಳು ರಸ್ತೆಗೆ ಇಳಿದಿದೆ. ಕಾರ್ಮಿಕರಿಗೆ ಮಾತ್ರ ಈ ಬಸ್ಸು ಮೀಸಲಾಗಿದ್ದು ಬೇರೆ ಯಾರೇ ಪ್ರಯಾಣಿಕರು ಪ್ರಯಾಣಿಸುವಂತಿಲ್ಲ.
  • Blogger Comments
  • Facebook Comments

0 comments:

Post a Comment

Item Reviewed: ವಲಸೆ ಕಾರ್ಮಿಕರ ಓಡಾಟಕ್ಕೆ ಸಂಚಾರ ಆರಂಭಿಸಿದ ಕೆಎಸ್ಸಾರ್ಟಿಸಿ ಬಸ್ಸುಗಳು Rating: 5 Reviewed By: karavali Times
Scroll to Top