ನಂದಾವರ : ದ್ವಿಚಕ್ರ ವಾಹನ ರಸ್ತೆಗೆ ಅಪ್ಪಳಿಸಿ ಸವಾರ ಸಾವು - Karavali Times ನಂದಾವರ : ದ್ವಿಚಕ್ರ ವಾಹನ ರಸ್ತೆಗೆ ಅಪ್ಪಳಿಸಿ ಸವಾರ ಸಾವು - Karavali Times

728x90

9 August 2020

ನಂದಾವರ : ದ್ವಿಚಕ್ರ ವಾಹನ ರಸ್ತೆಗೆ ಅಪ್ಪಳಿಸಿ ಸವಾರ ಸಾವು


 ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಸವಾರ ನರಿಕೊಂಬು ನಿವಾಸಿ ಶಿವಾನಂದ (45) ಅವರು ಮೃತಪಟ್ಟಿದ್ದಾರೆ. 

ಶಿವಾನಂದ ಅವರು ನಂದವಾರ ದೇವಸ್ಥಾನದಲ್ಲಿ ಸಂಬಂಧಿಕರ ಉತ್ತರಕ್ರಿಯೆಗೆಂದು ಭಾನುವಾರ ಮಧ್ಯಾಹ್ನ ವೇಳೆ ತೆರಳಿದ್ದರು. ಅಲ್ಲಿಂದ ಕಾರ್ಯಕ್ರಮ ಮುಗಿಸಿ ವಾಪಾಸು ಬರುತ್ತಿದ್ದ ವೇಳೆ ನಂದಾವರದಲ್ಲಿ ದ್ವಿಚಕ್ರ ವಾಹನ ನಿಯಂತ್ರಣ ಮೀರಿ ಸ್ಕಿಡ್ ಆಗಿ ರಸ್ತೆಗೆ ಅಪ್ಪಳಿಸಿದೆ ಎನ್ನಲಾಗಿದೆ. ಘಟನೆಯಿಂದ ಶಿವಾನಂದ ಅವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 





  • Blogger Comments
  • Facebook Comments

0 comments:

Post a Comment

Item Reviewed: ನಂದಾವರ : ದ್ವಿಚಕ್ರ ವಾಹನ ರಸ್ತೆಗೆ ಅಪ್ಪಳಿಸಿ ಸವಾರ ಸಾವು Rating: 5 Reviewed By: karavali Times
Scroll to Top