ಕಾರ್ಕಳ : ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ಯುವಕರ ಮೇಲೆ ಕಾರು ಹರಿದು ಇಬ್ಬರು ಮೃತ - Karavali Times ಕಾರ್ಕಳ : ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ಯುವಕರ ಮೇಲೆ ಕಾರು ಹರಿದು ಇಬ್ಬರು ಮೃತ - Karavali Times

728x90

31 December 2020

ಕಾರ್ಕಳ : ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ಯುವಕರ ಮೇಲೆ ಕಾರು ಹರಿದು ಇಬ್ಬರು ಮೃತ

 


ಕಾರ್ಕಳ, ಜ. 01, 2020 (ಕರಾವಳಿ ಟೈಮ್ಸ್) : ಇಲ್ಲಿನ ಮಿಯಾರು ಕಾಜರಬೈಲು ಸಮೀಪ ಗುರುವಾರ ರಾತ್ರಿ ರಸ್ತೆಯಲ್ಲಿ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ಯುವಕರ ಮೇಲೆ ವೇಗವಾಗಿ ಬಂದ ಕಾರು ಹರಿದು ವಿಜಯಪುರ ಮೂಲದ ಇಬ್ಬರು ಯುವಕರಾದ ಶರಣ್ (26) ಹಾಗೂ ಸಿದ್ದು (25) ಎಂಬವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನವರೆಂದು ತಿಳಿದುಬಂದಿದ್ದು, ಅಪಘಾದಲ್ಲಿ ತೌಸೀಫ್ ಹಾಗೂ ಬಸವರಾಜ್ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊಸ ವರ್ಷದ ಹಿನ್ನೆಲೆಯಲ್ಲಿ  ನಾಲ್ವರು ಯುವಕರು ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುವುದಕ್ಕಾಗಿ ಸೇರಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಇಕೋ ಕಾರು ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಘಟನೆ ಸಂಬಂಧ ಕಾರ್ಕಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 







  • Blogger Comments
  • Facebook Comments

0 comments:

Post a Comment

Item Reviewed: ಕಾರ್ಕಳ : ರಸ್ತೆ ಮೇಲೆ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ಯುವಕರ ಮೇಲೆ ಕಾರು ಹರಿದು ಇಬ್ಬರು ಮೃತ Rating: 5 Reviewed By: karavali Times
Scroll to Top