ಮೂಲ ಸೌಕರ್ಯ ಕೊರತೆ ಹಿನ್ನಲೆ : ರಾಜ್ಯದ 6 ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಣೆ ರದ್ದುಗೊಳಿಸಿ ವಿಟಿಯು ಆದೇಶ, ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಸೂಚನೆ  - Karavali Times ಮೂಲ ಸೌಕರ್ಯ ಕೊರತೆ ಹಿನ್ನಲೆ : ರಾಜ್ಯದ 6 ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಣೆ ರದ್ದುಗೊಳಿಸಿ ವಿಟಿಯು ಆದೇಶ, ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಸೂಚನೆ  - Karavali Times

728x90

20 August 2021

ಮೂಲ ಸೌಕರ್ಯ ಕೊರತೆ ಹಿನ್ನಲೆ : ರಾಜ್ಯದ 6 ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಣೆ ರದ್ದುಗೊಳಿಸಿ ವಿಟಿಯು ಆದೇಶ, ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಸೂಚನೆ 

 ಬೆಳಗಾವಿ, ಆಗಸ್ಟ್ 20, 2021 (ಕರಾವಳಿ ಟೈಮ್ಸ್) : ರಾಜ್ಯದ 6 ಇಂಜಿನಿಯರಿಂಗ್​ ಕಾಲೇಜುಗಳನ್ನು ಬಂದ್ ಮಾಡಲು ಬೆಳಗಾವಿ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ) ನಿರ್ಧರಿಸಿದೆ. ಗುಣಮಟ್ಟದ ಬೋಧನೆಯಲ್ಲಿ ವಿಫಲವಾಗಿರುವ ಹಾಗೂ ವಿದ್ಯಾರ್ಥಿಗಳ ಬೋಧನೆಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ಮಾಡಿಕೊಂಡಿಲ್ಲ ಎಂಬುದೇ ಕಾಲೇಜು ಬಂದ್ ನಿರ್ಧಾರ ಕೈಗೊಳ್ಳಲು ಕಾರಣ. 

 ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಶಿಕ್ಷಣ ಸಚಿವ ನಾಗೇಶ್ ವಿಶ್ವ ವಿದ್ಯಾಲಯದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಪ್ರಸ್ತುತ 2021-22ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯದ ಈ ಆರು ಕಾಲೇಜಗಳಾದ ಬೆಂಗಳೂರಿನ ಆಲ್ಫಾ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ., ಬೆಳಗಾವಿಯ ಶೇಖ್ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ., ಬೆಂಗಳೂರಿನ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ., ಚಾಮರಾಜನಗರದ ಏಕಲವ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ., ಕೆಜಿಎಫ್‌ನ ಶ್ರೀ ವಿನಾಯಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ., ಬೆಂಗಳೂರಿನ ಬಿಟಿಎಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾರ್ಯನಿರ್ವಹಣೆ ಸ್ಥಗಿತವಾಗಲಿದೆ.

 ಸದ್ರಿ ಕಾಲೇಜುಗಳಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಲು ವಿಟಿಯು ಸೂಚಿಸಿದೆ.   2021-22ನೇ ಸಾಲಿನ ಶೈಕ್ಷಣಿಕ ವರ್ಷದಿಂದ ರದ್ದಾಗಿರುವ ಈ ಕಾಲೇಜುಗಳಿಗೆ ಪ್ರವೇಶ ಪಡೆಯದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವಿಟಿಯು ಎಚ್ಚರಿಕೆ ನೀಡಿದೆ.

  • Blogger Comments
  • Facebook Comments

1 comments:

  1. ಮಂತ್ರಿ ಯವರಿಗೆ ಲಂಚ ಬರಲಿಲ್ಲ ಬೇಗ ಬಂದ್ ಮಾಡಿ

    ReplyDelete

Item Reviewed: ಮೂಲ ಸೌಕರ್ಯ ಕೊರತೆ ಹಿನ್ನಲೆ : ರಾಜ್ಯದ 6 ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಣೆ ರದ್ದುಗೊಳಿಸಿ ವಿಟಿಯು ಆದೇಶ, ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಸೂಚನೆ  Rating: 5 Reviewed By: karavali Times
Scroll to Top