ಪುಸ್ತಕ, ಸಮವಸ್ತ್ರ ಹಾಗೂ ಇತರ ಶೈಕ್ಷಣಿಕ ಸಾಮಗ್ರಿ ಖರೀದಿಗೆ ಶಾಲೆಗಳು ಒತ್ತಾಯಪೂರ್ವಕ ನಿರ್ಬಂಧ ವಿಧಿಸಿದರೆ ಪೋಷಕರು ದೂರು ನೀಡಿ : ಡೀಸಿ ರಾಜೇಂದ್ರ ಸೂಚನೆ  - Karavali Times ಪುಸ್ತಕ, ಸಮವಸ್ತ್ರ ಹಾಗೂ ಇತರ ಶೈಕ್ಷಣಿಕ ಸಾಮಗ್ರಿ ಖರೀದಿಗೆ ಶಾಲೆಗಳು ಒತ್ತಾಯಪೂರ್ವಕ ನಿರ್ಬಂಧ ವಿಧಿಸಿದರೆ ಪೋಷಕರು ದೂರು ನೀಡಿ : ಡೀಸಿ ರಾಜೇಂದ್ರ ಸೂಚನೆ  - Karavali Times

728x90

26 October 2021

ಪುಸ್ತಕ, ಸಮವಸ್ತ್ರ ಹಾಗೂ ಇತರ ಶೈಕ್ಷಣಿಕ ಸಾಮಗ್ರಿ ಖರೀದಿಗೆ ಶಾಲೆಗಳು ಒತ್ತಾಯಪೂರ್ವಕ ನಿರ್ಬಂಧ ವಿಧಿಸಿದರೆ ಪೋಷಕರು ದೂರು ನೀಡಿ : ಡೀಸಿ ರಾಜೇಂದ್ರ ಸೂಚನೆ 

 ಮಂಗಳೂರು, ಅಕ್ಟೋಬರ್ 27, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಅನುದಾನಿತ, ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳು ಶಾಲೆಗಳಿಂದಲೇ ಅಥವಾ ನಿರ್ದಿಷ್ಟ ಅಂಗಡಿಗಳಿಂದಲೇ ಬರೆಯುವ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಹಾಗೂ ಇತರ ಶೈಕ್ಷಣಿಕ ಸಾಮಾಗ್ರಿಗಳನ್ನು ಖರೀದಿಸುವಂತೆ ವಿದ್ಯಾರ್ಥಿ ಪೋಷಕರನ್ನು ಒತ್ತಾಯಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಶಾಲಾಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. 

 ಪ್ರತಿ ತರಗತಿಗೆ ನಿಗದಿಪಡಿಸಿದ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಮತ್ತು ಇತರ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಪೋಷಕರು ಸ್ವತಂತ್ರರಾಗಿದ್ದು, ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ನೋಂದಣಿ ಮತ್ತು ಅನುಮತಿ ಪಡೆಯುವಾಗ ಹಾಗೂ ಕೇಂದ್ರ ಪಠ್ಯಕ್ರಮ ಶಾಲೆಗೆ ಸಂಯೋಜನೆಗೆ ಪಡೆಯುವಾಗ ಶಿಕ್ಷಣ ಇಲಾಖೆಯ ನಿಯಮಗಳನ್ನು ಅನುಸರಿಬೇಕೆಂಬ ಷರತ್ತಿನ ಮೇರೆಗೆ ನೋಂದಣಿ, ಮಾನ್ಯತೆ ಹಾಗೂ ನಿರಾಕ್ಷೇಕ್ಷಣಾ ಪತ್ರ ನೀಡಲಾಗಿರುತ್ತದೆ ಎಂದಿರುವ ಡೀಸಿ ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ಕಂಡು ಬಂದಲ್ಲಿ ಅಂತಹ ಶಾಲೆಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. 

ಈ ಬಗ್ಗೆ ದೂರುಗಳಿದ್ದಲ್ಲಿ ಪೋಷಕರು ನೇರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಂಬಂಧಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಬಹುದು ಎಂದಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪುಸ್ತಕ, ಸಮವಸ್ತ್ರ ಹಾಗೂ ಇತರ ಶೈಕ್ಷಣಿಕ ಸಾಮಗ್ರಿ ಖರೀದಿಗೆ ಶಾಲೆಗಳು ಒತ್ತಾಯಪೂರ್ವಕ ನಿರ್ಬಂಧ ವಿಧಿಸಿದರೆ ಪೋಷಕರು ದೂರು ನೀಡಿ : ಡೀಸಿ ರಾಜೇಂದ್ರ ಸೂಚನೆ  Rating: 5 Reviewed By: karavali Times
Scroll to Top