ಕೇರಳ ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರಕಾರ ತಕ್ಷಣ ನೆರವಿಗೆ ಧಾವಿಸಬೇಕು : ಯು.ಟಿ. ಖಾದರ್ - Karavali Times ಕೇರಳ ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರಕಾರ ತಕ್ಷಣ ನೆರವಿಗೆ ಧಾವಿಸಬೇಕು : ಯು.ಟಿ. ಖಾದರ್ - Karavali Times

728x90

7 August 2020

ಕೇರಳ ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರಕಾರ ತಕ್ಷಣ ನೆರವಿಗೆ ಧಾವಿಸಬೇಕು : ಯು.ಟಿ. ಖಾದರ್

 

  

ಮಂಗಳೂರು (ಕರಾವಳಿ ಟೈಮ್ಸ್) : ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಕನ್ನಡಿಗರು ಇದ್ದರೆ ರಾಜ್ಯ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇರಳದ ಕಲ್ಲಿಕೋಟೆಯಲ್ಲಿ ಸಂಭವಿಸಿದ ವಂದೇ ಭಾರತ್ ವಿಮಾನ ದುರಂತ ನನ್ನನ್ನು ದಿಗ್ಭ್ರಮೆಗೊಳಿಸಿದೆ. ದೂರದ ದುಬೈನಿಂದ ತವರಿನ ಕನಸು ಹೊತ್ತು ಬಂದವರು ಕ್ಷಣಾರ್ಧದಲ್ಲೇ ಕಣ್ಮುಚ್ಚಿರುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ.


ಮತ್ತೊಂದು ಟ್ವೀಟ್ ಮಾಡಿರುವ ಖಾದರ್, ವಿಮಾನದಲ್ಲಿ ಕನ್ನಡಿಗರು ಇರುವ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇನೆ. ಕನ್ನಡಿಗರು ಈ ವಿಮಾನದಲ್ಲಿ ಇದ್ದಿದ್ದೇ ಆದಲ್ಲಿ ರಾಜ್ಯ ಸರ್ಕಾರ ಕೂಡಲೇ ಅವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.



  • Blogger Comments
  • Facebook Comments

0 comments:

Post a Comment

Item Reviewed: ಕೇರಳ ವಿಮಾನ ದುರಂತದಲ್ಲಿ ಕನ್ನಡಿಗರಿದ್ದರೆ ಸರಕಾರ ತಕ್ಷಣ ನೆರವಿಗೆ ಧಾವಿಸಬೇಕು : ಯು.ಟಿ. ಖಾದರ್ Rating: 5 Reviewed By: karavali Times
Scroll to Top