ಕಾರಿನಲ್ಲಿ ಗಾಂಜಾ ಸಾಗಾಟ ಬೇಧಿಸಿದ ವಿಟ್ಲ ಪೊಲೀಸರಿಂದ ಓರ್ವನ ದಸ್ತಗಿರಿ : ತಲೆ ಮರೆಸಿಕೊಂಡ ಇಬ್ಬರಿಗಾಗಿ ಶೋಧ - Karavali Times ಕಾರಿನಲ್ಲಿ ಗಾಂಜಾ ಸಾಗಾಟ ಬೇಧಿಸಿದ ವಿಟ್ಲ ಪೊಲೀಸರಿಂದ ಓರ್ವನ ದಸ್ತಗಿರಿ : ತಲೆ ಮರೆಸಿಕೊಂಡ ಇಬ್ಬರಿಗಾಗಿ ಶೋಧ - Karavali Times

728x90

7 April 2021

ಕಾರಿನಲ್ಲಿ ಗಾಂಜಾ ಸಾಗಾಟ ಬೇಧಿಸಿದ ವಿಟ್ಲ ಪೊಲೀಸರಿಂದ ಓರ್ವನ ದಸ್ತಗಿರಿ : ತಲೆ ಮರೆಸಿಕೊಂಡ ಇಬ್ಬರಿಗಾಗಿ ಶೋಧ


ಬಂಟ್ವಾಳ, ಎಪ್ರಿಲ್ 07, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಮಂಗಳವಾರ ರಾತ್ರಿ ಸುಮಾರು 7.30ರವೇಳೆಗೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಗಾಂಜಾ ಸಾಗಾಟ ಪ್ರಕರಣ ಬೇಧಿಸಿ ಕಾರು, ಗಾಂಜಾ ಸಹಿತ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಪಾತೂರು-ಕಜೆ ನಿವಾಸಿ ನಾಸಿರ್ ಎಂದು ಹೆಸರಿಸಲಾಗಿದೆ. ಈತ ಮಾರುತಿ ಆಲ್ಟೋ ಕಾರಿನಲ್ಲಿ 2 ಕೆಜಿ ತೂಕದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಬಾಕ್ರಬೈಲು ನಿವಾಸಿ ಬಾರಿಕ್ ಹಾಗೂ ಪಾತೂರು ನಿವಾಸಿ ಮುಸ್ತಫಾ ತಲೆ ಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. 

ಪೊಲೀಸರು ವಶಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ 20 ಸಾವಿರ ರೂಪಾಯಿ ಹಾಗೂ ವಶಪಡಿಸಿಕೊಂಡ ಕಾರಿನ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ , ಅÀವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿ’ಸೋಜಾ ಅವರ ಸೂಚನೆ ಮೇರೆಗೆ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೆÇಲೀಸು ಠಾಣಾ ಪಿಎಸ್ಸೈ ವಿನೋದ್ ಎಸ್.ಕೆ ಹಾಗೂ ಸಿಬ್ಬಂದಿಗಳಾದ ಎಚ್.ಸಿ.ಗಳಾದ ಪ್ರಸನ್ನ, ಜಯರಾಮ ಕೆ.ಟಿ, ಪ್ರತಾಪ್ ರೆಡ್ಡಿ, ಲೋಕೇಶ, ಹೇಮರಾಜ್ ಹಾಗೂ ವಿನಾಯಕ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬಂಟ್ವಾಳ ಪೆÇಲೀಸು ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಾರಿನಲ್ಲಿ ಗಾಂಜಾ ಸಾಗಾಟ ಬೇಧಿಸಿದ ವಿಟ್ಲ ಪೊಲೀಸರಿಂದ ಓರ್ವನ ದಸ್ತಗಿರಿ : ತಲೆ ಮರೆಸಿಕೊಂಡ ಇಬ್ಬರಿಗಾಗಿ ಶೋಧ Rating: 5 Reviewed By: karavali Times
Scroll to Top