ನಾಳೆ (ಪೆ. 28) ಮಾಣಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ಜನಜಾಗೃತಿ ಸಮಾವೇಶ - Karavali Times ನಾಳೆ (ಪೆ. 28) ಮಾಣಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ಜನಜಾಗೃತಿ ಸಮಾವೇಶ - Karavali Times

728x90

27 February 2020

ನಾಳೆ (ಪೆ. 28) ಮಾಣಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ಜನಜಾಗೃತಿ ಸಮಾವೇಶ



ಬಂಟ್ವಾಳ (ಕರಾವಳಿ ಟೈಮ್ಸ್) : ಮಾಣಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಂವಿಧಾನ ವಿರೋಧಿ ಕರಾಳ ಕಾನೂನನ್ನು ಹಾಗೂ ದೇಶದ ಉದ್ದಗಲಕ್ಕೂ ಫ್ಯಾಸಿಸ್ಟ್ ಶಕ್ತಿಗಳಿಂದ ನಡೆಯುತ್ತಿರುವ ಕಗ್ಗೊಲೆಗಳನ್ನು ಖಂಡಿಸಿ ಪೆ 28 ರಂದು ಮಧ್ಯಾಹ್ನ 2:30 ಕ್ಕೆ ಮಾಣಿಯ ಗಾಂಧಿ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡಯಲಿದೆ.

ಸುದ್ದಿ ಟಿವಿ ಸಂಪಾದಕ ಶಶಿಧರ್ ಭಟ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್, ಪ್ರಗತಿಪರ ಹೋರಾಟಗಾರ ಬಿ ಆರ್ ಬಾಸ್ಕರ್ ಪ್ರಸಾದ್ ಬೆಂಗಳೂರು, ಮೈಸೂರು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮಿಜಿ, ಮಾಜಿ ಸಚಿವ ಬಿ ರಮಾನಾಥ ರೈ, ನಿವೃತ್ತ ಪೆÇೀಲಿಸ್ ಅಧಿಕಾರಿ ಜಿ ಎ ಬಾವ, ಜೆ.ಡಿ.ಎಸ್. ಮುಖಂಡ ಎಂ.ಬಿ. ಸದಾಶಿವ ಸುಳ್ಯ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಯಾಕುಬ್  ಸಅದಿ ಬೆಳ್ತಂಗಡಿ, ಪ್ರಗತಿಪರ ಹೋರಾಟಗಾರ್ತಿ ನೇಮಿ ಚಂದ್ರ ಬೆಳಗಾಂ, ಪ್ರಮುಖರಾದ ಅಡ್ವೊಕೇಟ್ ಅಮೀನ್ ಮೊಹ್ಸೀನ್, ಹನೀಫ್ ಖಾನ್ ಕೊಡಾಜೆ, ಸುದೀಪ್ ಕುಮಾರ್ ಶೆಟ್ಟಿ ಮಾಣಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಕಟಣೆ ತಿಳಿಸಿದೆ.









  • Blogger Comments
  • Facebook Comments

0 comments:

Post a Comment

Item Reviewed: ನಾಳೆ (ಪೆ. 28) ಮಾಣಿಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಖಂಡಿಸಿ ಜನಜಾಗೃತಿ ಸಮಾವೇಶ Rating: 5 Reviewed By: karavali Times
Scroll to Top