ಸರಕಾರದ ಪಡಿತರ ಘೋಷಣೆಗಳು ಜನರಿಗೆ ತಲುಪಲು ಸಿಎಂ ಕ್ರಮ ಕೈಗೊಳ್ಳಬೇಕು : ಸಿಎಂಗೆ ಟ್ವೀಟಿದ ಹಾಶೀರ್ ಪೇರಿಮಾರ್ - Karavali Times ಸರಕಾರದ ಪಡಿತರ ಘೋಷಣೆಗಳು ಜನರಿಗೆ ತಲುಪಲು ಸಿಎಂ ಕ್ರಮ ಕೈಗೊಳ್ಳಬೇಕು : ಸಿಎಂಗೆ ಟ್ವೀಟಿದ ಹಾಶೀರ್ ಪೇರಿಮಾರ್ - Karavali Times

728x90

16 April 2020

ಸರಕಾರದ ಪಡಿತರ ಘೋಷಣೆಗಳು ಜನರಿಗೆ ತಲುಪಲು ಸಿಎಂ ಕ್ರಮ ಕೈಗೊಳ್ಳಬೇಕು : ಸಿಎಂಗೆ ಟ್ವೀಟಿದ ಹಾಶೀರ್ ಪೇರಿಮಾರ್



ಬಂಟ್ವಾಳ (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ಲಾಕ್‍ಡೌನ್ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಲು ನೀಡುವ ಘೋಷಣೆಗಳು ಕೇವಲ ಘೋಷಣೆಯಾಗಿಯೇ ಉಳಿಯದೆ ಎಲ್ಲವನ್ನೂ ಜನರಿಗೆ ತಲುಪಿಸುವಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ


ಈ ಬಗ್ಗೆ ಮುಖ್ಯಮಂತ್ರಿಗೆ ಟ್ವೀಟ್ ಮಾಡಿರುವ ಹಾಶೀರ್ ಅವರು, ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿ ಮಾಡಲಾಗಿರುವ ಸಂಪೂರ್ಣ ಲಾಕ್‍ಡೌನ್ ಸಂದರ್ಭದಲ್ಲಿ ಜನ ಒಂದು ಹೊತ್ತಿನ ಆಹಾರವಿಲ್ಲದೆ ಬಳಲುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯ ಸರಕಾರ ಜನರಿಗೆ  ಘೋಷಿಸಿದ ಪಡಿತರ ಸಾಮಾಗ್ರಿಗಳಿಗಾಗಿ ರೇಷನ್ ಅಂಗಡಿಗೆ ತೆರಳಿದ ವೇಳೆ ಎಪಿಎಲ್ ಪಡಿತರ ಚೀಟಿ ಹೊಂದಿದ ಮಧ್ಯಮ ವರ್ಗದ ಕುಟುಂಬಸ್ಥರು ಕೆವೈಸಿ ಸಲ್ಲಿಸಿಲ್ಲ ಎಂಬ ಕಾರಣದಿಂದ ಪಡಿತರ ಸಾಮಾಗ್ರಿ ನೀಡುತ್ತಿಲ್ಲ ಹಾಗೂ ಹೊಸ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಸರಕಾರದ ಆದೇಶ ಬಂದಿಲ್ಲ ಎಂಬ ಕಾರಣ ನೀಡಿ ರೇಶನ್ ನೀಡುತ್ತಿಲ್ಲ. ಇದರಿಂದಾಗಿ ಬಡ ಕುಟುಂಬಗಳು ರೇಶನ್ ಅಂಗಡಿಯಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಖುದ್ದು ರಾಜ್ಯದ ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ಬಡ ಜನರಿಗಾಗಿ ಸರಕಾರ ಘೋಷಣೆ ಮಾಡಿರುವ ಎಲ್ಲ ಸವಲತ್ತುಗಳನ್ನು ತಳಮಟ್ಟದ ಜನರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ಪಡಿತರ ಘೋಷಣೆಗಳು ಜನರಿಗೆ ತಲುಪಲು ಸಿಎಂ ಕ್ರಮ ಕೈಗೊಳ್ಳಬೇಕು : ಸಿಎಂಗೆ ಟ್ವೀಟಿದ ಹಾಶೀರ್ ಪೇರಿಮಾರ್ Rating: 5 Reviewed By: karavali Times
Scroll to Top