ಅನಿರ್ದಿಷ್ಟಾವಧಿಗೆ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದ ಕೆ.ಎಸ್.ಆರ್.ಟಿ.ಸಿ. - Karavali Times ಅನಿರ್ದಿಷ್ಟಾವಧಿಗೆ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದ ಕೆ.ಎಸ್.ಆರ್.ಟಿ.ಸಿ. - Karavali Times

728x90

12 April 2020

ಅನಿರ್ದಿಷ್ಟಾವಧಿಗೆ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದ ಕೆ.ಎಸ್.ಆರ್.ಟಿ.ಸಿ.



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ತಡೆಗಟ್ಟುವಿಕೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿಧಿಸಲಾಗಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ.

ಮುಂದೆ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ಅಂದಾಜಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆ.ಎಸ್.ಆರ್. ಟಿ.ಸಿ. ಟಿಕೆಟ್ ಬುಕ್ಕಿಂಗನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಿದೆ. ಇದುವರೆಗೆ ಬುಕ್ಕಿಂಗ್ ಮಾಡಿರುವವರ ಟಿಕೆಟ್‍ಗಳನ್ನು ರದ್ದುಗೊಳಿಸಲಾಗಿದ್ದು ಅವರ ಹಣವನ್ನು ಹಿಂತಿರುಗಿಸಲಾಗುತ್ತದೆ.

ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಟಿಕೆಟ್ ಬುಕ್ಕಿಂಗನ್ನು ರದ್ದುಗೊಳಿಸಲಾಗಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಇದೇ ವೇಳೆ ಕೆ.ಎಸ್.ಆರ್.ಟಿ.ಸಿ. ಅವಶ್ಯಕ ಮತ್ತು ತುರ್ತು ಸೇವೆಯ ಸಿಬ್ಬಂದಿಗಳಿಗೆ ಮೊಬೈಲ್ ಸ್ಯಾನಿಟೈಸರ್ ಬಸ್ “ಸಾರಿಗೆ ಸಂಜೀವಿನಿ”ಯನ್ನು ಆರಂಭಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಅನಿರ್ದಿಷ್ಟಾವಧಿಗೆ ಟಿಕೆಟ್ ಬುಕ್ಕಿಂಗ್ ರದ್ದುಗೊಳಿಸಿದ ಕೆ.ಎಸ್.ಆರ್.ಟಿ.ಸಿ. Rating: 5 Reviewed By: karavali Times
Scroll to Top