ಅಬುಧಾಬಿ ಕೆಸಿಎಫ್ ವತಿಯಿಂದ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ - Karavali Times ಅಬುಧಾಬಿ ಕೆಸಿಎಫ್ ವತಿಯಿಂದ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ - Karavali Times

728x90

22 April 2020

ಅಬುಧಾಬಿ ಕೆಸಿಎಫ್ ವತಿಯಿಂದ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ




ಬಂಟ್ವಾಳ (ಕರಾವಳಿ ಟೈಮ್ಸ್) : ಕೆದಿಲ ಗ್ರಾಮದ ಕುದುಂಬ್ಲಾಡಿ - ಕಲ್ಲಸರ್ಪೆ ನಿವಾಸಿ ಆಸಿಯಮ್ಮ ಎಂಬವರಿಗೆ ಕರ್ನಾಟಕ ಕಲ್ಚರಲ್ ಫೋರಂ (ಕೆಸಿಎಫ್) ಅಬುದಾಬಿ ಝೋನ್ ವತಿಯಿಂದ ರೂಪಾಯಿ 25 ಸಾವಿರ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ನೀಡಲಾಯಿತು.

 ಇತ್ತೀಚೆಗೆ ಬೆಂಕಿ ಅವಘಡಕ್ಕೊಳಗಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿರುವ ಆಸಿಯಮ್ಮ ಅವರ ಮನೆಗೆ ತೆರಳಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಅಬೂಬಕ್ಕರ್ ಸಜಿಪ ಸಹಾಯಧನ ಹಸ್ತಾಂತರಿಸಿದರು.

  ಈ ಸಂದರ್ಭ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಮಾಜಿ ಕೌನ್ಸಿಲರ್ ಸಿದ್ದೀಕ್ ಕೊಳಕೆ, ಹನೀಫ್ ಗೋಳಿಪಡ್ಪು, ಎಸ್ ವೈ ಎಸ್ ಪಾಟ್ರಕೋಡಿ ವಲಯ ಉಪಾಧ್ಯಕ್ಷ ಖಾಸಿಂ ಕೆ, ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಎಸ್ಸೆಸ್ಸೆಫ್ ಕಾರ್ಯದರ್ಶಿ ಖಲಂದರ್, ಕೆ.ಬಿ.ಮುಹಮ್ಮದ್ ಪಾಟ್ರಕೋಡಿ ಮೊದಲಾದವರು ಉಪಸ್ಥಿತರಿದ್ಥರು.

  ಬಹು ಕಾಲ ಅನಾರೋಗ್ಯದಿಂದ ಇದ್ದು ಇತ್ತೀಚೆಗೆ ನಿಧನರಾದ ಉಜಿರೆ ಸಮೀಪದ ಮಾಚಾರು - ಪಾದೆಮನೆ ನಿವಾಸಿ ಆಮೀನಾ ಅವರ ಮನೆಗೆ ತೆರಳಿ ಅವರ ಪುತ್ರ ಮುಹಮ್ಮದ್ ರಫೀಕ್ ಅವರಿಗೆ ಸಹಾಯಧನ ಹಾಗೂ ರಮ್ಜಾನ್ ಕಿಟ್ ವಿತರಿಸಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಅಬುಧಾಬಿ ಕೆಸಿಎಫ್ ವತಿಯಿಂದ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ Rating: 5 Reviewed By: karavali Times
Scroll to Top