ಮಂಗಳೂರು : ವಾರ್ತಾ ಇಲಾಖೆಯಿಂದ ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ - Karavali Times ಮಂಗಳೂರು : ವಾರ್ತಾ ಇಲಾಖೆಯಿಂದ ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ - Karavali Times

728x90

25 April 2020

ಮಂಗಳೂರು : ವಾರ್ತಾ ಇಲಾಖೆಯಿಂದ ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ




ಮಂಗಳೂರು (ಕರಾವಳಿ ಟೈಮ್ಸ್) : ಕನ್ನಡದ ಹೆಮ್ಮೆಯ ವರನಟ, ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ. ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆಯನ್ನು ನಗರದ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.

ದೇಶಾದ್ಯಂತ ಲಾಕ್‍ಡೌನ್ ಇರುವ ಕಾರಣ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ಸರಕಾರ ತೀರ್ಮಾನಿಸಿದ ಹಿನ್ನಲೆಯಲ್ಲಿ ಕಛೇರಿಗೆ ಸೀಮಿತಗೊಳಿಸಿ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಅವರು ರಾಜ್ ಜನ್ಮದಿನಾಚರಣೆಗೆ ವ್ಯವಸ್ಥೆ ಮಾಡಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಕಾರ್ಯಕ್ರಮ ಉದ್ಘಾಟಿಸಿ ಡಾ. ರಾಜ್ ಅವರ ಜೀವನದ ಬಗ್ಗೆ ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ಕಾರ್ಯಕ್ರಮ ನಡೆಸಿಕೊಟ್ಟರು.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ವಾರ್ತಾ ಇಲಾಖೆಯಿಂದ ಡಾ. ರಾಜ್‍ಕುಮಾರ್ 91ನೇ ಜನ್ಮದಿನಾಚರಣೆ Rating: 5 Reviewed By: karavali Times
Scroll to Top