ಸಿದ್ದಕಟ್ಟೆ : ಬ್ಯಾರಿಕೇಡ್ ಬೇಧಿಸಿದ ಬೈಕ್ ಸವಾರನಿಂದ ಯುವಕನಿಗೆ ಚೂರಿ ಇರಿತ - Karavali Times ಸಿದ್ದಕಟ್ಟೆ : ಬ್ಯಾರಿಕೇಡ್ ಬೇಧಿಸಿದ ಬೈಕ್ ಸವಾರನಿಂದ ಯುವಕನಿಗೆ ಚೂರಿ ಇರಿತ - Karavali Times

728x90

28 April 2020

ಸಿದ್ದಕಟ್ಟೆ : ಬ್ಯಾರಿಕೇಡ್ ಬೇಧಿಸಿದ ಬೈಕ್ ಸವಾರನಿಂದ ಯುವಕನಿಗೆ ಚೂರಿ ಇರಿತ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಿದ್ದಕಟ್ಟೆ ಸಮೀಪದ ಪುಚ್ಚಮೊಗರು ಎಂಬಲ್ಲಿ ಅಪರಿಚಿತ ಬೈಕ್ ಸವಾರ ಇಲ್ಲಿನ ತಾಕೋಡೆ ಕ್ರಾಸ್ ಬಳಿ ಪೊಲೀಸ್ ಬ್ಯಾರಿಕೇಡ್ ಬೇಧಿಸಿ ಅತೀ ವೇಗದಲ್ಲಿ ಸಂಚರಿಸಿದ್ದು, ಈತನನ್ನು ಅಡ್ಡ ಹಾಕಲು ಬಂದಿದ್ದ ಯುವಕ ಕರಿಂಜೆ ನಿವಾಸಿ ಶಿವಕುಮಾರ್ ಎಂಬಾತನಿಗೆ ಸವಾರ ಚೂರಿಯಿಂದ ಇರಿದು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.

    ಸಿದ್ದಕಟ್ಟೆ ಕಡೆಯಿಂದ ಅತೀ ವೇಗವಾಗಿ ಧಾವಿಸಿ ಬಂದ ಅಪರಿಚಿತ ಬೈಕ್ ಸವಾರ ಪುಚ್ಚಮೊಗರುವಿನಲ್ಲಿ ಪೊಲೀಸ್ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಅದೇ ವೇಗದಲ್ಲಿ ಮುಂದುವರಿದಿದ್ದಾನೆ. ಈ ಸಂದರ್ಭ ಸ್ಥಳೀಯ ಯುವಕರ ಗುಂಪು ಬೈಕ್ ಸವಾರರನ್ನು ಬೆನ್ನಟ್ಟಿದ್ದು, ಈ ಸಂದರ್ಭ ತಾಕೋಡೆ ಕ್ರಾಸ್ ಬಳಿ ಬೈಕ್ ಸವಾರ ಸ್ಥಳೀಯ ಯುವಕರ ತಂಡದಲ್ಲಿದ್ದ ಶಿವಕುಮಾರ್‍ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಇರಿತದಿಂದ ಗಾಯಗೊಂಡಿರು ಶಿವಕುಮಾರನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಸಿದ್ದಕಟ್ಟೆ : ಬ್ಯಾರಿಕೇಡ್ ಬೇಧಿಸಿದ ಬೈಕ್ ಸವಾರನಿಂದ ಯುವಕನಿಗೆ ಚೂರಿ ಇರಿತ Rating: 5 Reviewed By: karavali Times
Scroll to Top