6 ತಿಂಗಳು ಉಚಿತ ಪಡಿತರ ವಿಸ್ತರಿಸಿ, ಯಾರು ಹಸಿವಿಂದ ಬಳಲದಂತೆ ನೋಡಿಕೊಳ್ಳಿ : ಪ್ರಧಾನಿಗೆ ಸೋನಿಯಾ ಪತ್ರ - Karavali Times 6 ತಿಂಗಳು ಉಚಿತ ಪಡಿತರ ವಿಸ್ತರಿಸಿ, ಯಾರು ಹಸಿವಿಂದ ಬಳಲದಂತೆ ನೋಡಿಕೊಳ್ಳಿ : ಪ್ರಧಾನಿಗೆ ಸೋನಿಯಾ ಪತ್ರ - Karavali Times

728x90

13 April 2020

6 ತಿಂಗಳು ಉಚಿತ ಪಡಿತರ ವಿಸ್ತರಿಸಿ, ಯಾರು ಹಸಿವಿಂದ ಬಳಲದಂತೆ ನೋಡಿಕೊಳ್ಳಿ : ಪ್ರಧಾನಿಗೆ ಸೋನಿಯಾ ಪತ್ರ



ನವದೆಹಲಿ (ಕರಾವಳಿ ಟೈಮ್ಸ್) : ಮೂರು ತಿಂಗಳ ಅವಧಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರವನ್ನು ಸೆಪ್ಟೆಂಬರ್‍ವರೆಗೂ ಮುಂದುವರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಎರಡು ಪುಟಗಳ ಪತ್ರ ಬರೆದಿರುವ ಸೋನಿಯಾ ಗಾಂಧಿ ಲಾಕ್‍ಡೌನ್‍ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಪಡಿತರವನ್ನು ಆರು ತಿಂಗಳಿಗೆ ವಿಸ್ತರಿಸಬೇಕು. ಯಾರೂ ಕೂಡಾ ಮುಂದಿನ ದಿನಗಳಲ್ಲಿ ಹಸಿವಿನಿಂದ ಇರಬಾರದು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‍ವರೆಗೂ ಉಚಿತ ಪಡಿತರ ನೀಡುವುದನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.

ಆಹಾರ ಭದ್ರತೆ ಕಾಯ್ದೆಯಡಿ 5 ಕೆಜಿ ಬದಲಿಗೆ 10 ಕೆಜಿ ಗೋಧಿ ಅಥವಾ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ನೀಡಿದರೆ ದೀರ್ಘ ಕಾಲದವರೆಗೂ ಜನರಿಗೆ ಉಪಯೋಗವಾಗಲಿದೆ. ಲಾಕ್‍ಡೌನ್‍ನಿಂದ ಸುರಕ್ಷಿತ ಕುಟುಂಬಗಳು ಕೂಡಾ ಅಭದ್ರತೆಗೆ ಸಿಲುಕಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: 6 ತಿಂಗಳು ಉಚಿತ ಪಡಿತರ ವಿಸ್ತರಿಸಿ, ಯಾರು ಹಸಿವಿಂದ ಬಳಲದಂತೆ ನೋಡಿಕೊಳ್ಳಿ : ಪ್ರಧಾನಿಗೆ ಸೋನಿಯಾ ಪತ್ರ Rating: 5 Reviewed By: karavali Times
Scroll to Top