ಈ ಬಾರಿಗೆ ಮಂಗಳೂರಿಗೆ ನೀರಿನ ರೇಷನಿಂಗ್ ಅಗತ್ಯವಿಲ್ಲ : ಮೇಯರ್ ದಿವಾಕರ - Karavali Times ಈ ಬಾರಿಗೆ ಮಂಗಳೂರಿಗೆ ನೀರಿನ ರೇಷನಿಂಗ್ ಅಗತ್ಯವಿಲ್ಲ : ಮೇಯರ್ ದಿವಾಕರ - Karavali Times

728x90

16 April 2020

ಈ ಬಾರಿಗೆ ಮಂಗಳೂರಿಗೆ ನೀರಿನ ರೇಷನಿಂಗ್ ಅಗತ್ಯವಿಲ್ಲ : ಮೇಯರ್ ದಿವಾಕರ



ಬಂಟ್ವಾಳ (ಕರಾವಳಿ ಟೈಮ್ಸ್) : ತುಂಬೆ ವೆಂಟೆಡ್ ಡ್ಯಾಂನಲ್ಲಿ ಮುಂದಿನ 50 ದಿನಗಳಿಗೆ ಬೇಕಾಗುವಷ್ಟು ನೀರಿನ ಲಭ್ಯತೆ ಇದ್ದು, ಈ ವರ್ಷ ನೀರಿನ ಕೊರತೆ ಬರುವುದಿಲ್ಲ ಮತ್ತು  ರೇಷನಿಂಗ್ ಮಾಡುವುದಿಲ್ಲ ಎಂದು ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ್ ತಿಳಿಸಿದ್ದಾರೆ.

ಗುರುವಾರ ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವರ್ಷ ಮಂಗಳೂರಿನ ಜನತೆಗೆ ನೀರಿನ ಅಭಾವ ಬರುವುದಿಲ್ಲ. ಕಳೆದ ವರ್ಷ ಈ ಸಮಯಕ್ಕೆ ರೇಷನಿಂಗ್ ವ್ಯವಸ್ಥೆಯ ಮೂಲಕ ಎರಡು ದಿನಕ್ಕೊಮ್ಮೆ ನೀರು ನೀಡಲಾಗುತ್ತಿತ್ತು. ಕೈಗಾರಿಕೆಗಳು ಬಂದ್ ಇದೆ, ಆದರೆ ಕೊರೋನಾ ಲಾಕ್‍ಡೌನ್‍ನಿಂದಾಗಿ ಜನರು ಮನೆಯಲ್ಲಿದ್ದು  ಹೆಚ್ಚು ನೀರನ್ನು ಬಳಸುತ್ತಾರೆ. ಆದರೂ ಈ ವರ್ಷ ನೀರಿನ ಅಭಾವ ಉಂಟಾಗುವುದಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಮನಪಾ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಕಳೆದ ವರ್ಷ ಮಾ. 13ಕ್ಕೆ ಎಎಂಆರ್ ಡ್ಯಾಂನಿಂದ ಸೆಕೆಂಡ್ ಫಿಲ್ಲಿಂಗ್ ಮಾಡಿದ್ದೆವು. ಈ ಬಾರಿ ಫಸ್ಟ್ ಫಿಲ್ಲಿಂಗನ್ನು ಮಾ.16ಕ್ಕೆ ಮಾಡಲಾಗಿದೆ. ಮುಂದಿನ 50 ದಿವಸಕ್ಕೆ ಬೇಕಾಗುವಷ್ಟು ನೀರಿನ ಸಂಗ್ರಹ ತುಂಬೆ ಡ್ಯಾಂನಲ್ಲಿದೆ. ಕಳೆದ ವರ್ಷ ರೇಷನಿಂಗ್ ಮಾಡಲಾಗಿತ್ತು. ಈ ವರ್ಷ ರೇಷನಿಂಗ್ ಮಾಡುವ ಅಗತ್ಯ ಇಲ್ಲ. ಜೂನ್‍ಗಿಂತ ಮೊದಲು ಮಳೆ ಬಂದರೆ ಯಥೇಚ್ಛವಾಗಿ ನೀರು ಸಿಗಲಿದೆ. ನೀರಿನ ಲಭ್ಯತೆಯ ಬಗ್ಗೆ ಜನರಿಗೆ ಆತಂಕ ಬೇಡ ಎಂದರು.

ಈ ಸಂದರ್ಭ ಸಹಾಯಕ ಆಯುಕ್ತ ಸಂತೋಷ್ ಕುಮಾರ್, ಕಿರಿಯ ಇಂಜಿನಿಯರ್ ನರೇಶ್ ಶೆಣೈ, ಇಂಜಿನಿಯರ್‍ಗಳಾದ ರವಿಶಂಕರ್, ರಿಚರ್ಡ್ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು. ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್ ಹಾಗೂ ಎಎಂಆರ್ ಡ್ಯಾಂನಲ್ಲಿ 16.6 ಮೀಟರ್ ನೀರಿದೆ.
  • Blogger Comments
  • Facebook Comments

0 comments:

Post a Comment

Item Reviewed: ಈ ಬಾರಿಗೆ ಮಂಗಳೂರಿಗೆ ನೀರಿನ ರೇಷನಿಂಗ್ ಅಗತ್ಯವಿಲ್ಲ : ಮೇಯರ್ ದಿವಾಕರ Rating: 5 Reviewed By: karavali Times
Scroll to Top