ನೆಟ್ಲಮುಡ್ನೂರು ನಿವಾಸಿ ರುಕಿಯಾ ನಿಧನ : ಕೊರೋನಾ ಪರೀಕ್ಷಾ ವರದಿ ಬಂದ ಬಳಿಕ ಮೃತದೇಹ ವಾರೀಸುದಾರರಿಗೆ ಹಸ್ತಾಂತರ - Karavali Times ನೆಟ್ಲಮುಡ್ನೂರು ನಿವಾಸಿ ರುಕಿಯಾ ನಿಧನ : ಕೊರೋನಾ ಪರೀಕ್ಷಾ ವರದಿ ಬಂದ ಬಳಿಕ ಮೃತದೇಹ ವಾರೀಸುದಾರರಿಗೆ ಹಸ್ತಾಂತರ - Karavali Times

728x90

5 April 2020

ನೆಟ್ಲಮುಡ್ನೂರು ನಿವಾಸಿ ರುಕಿಯಾ ನಿಧನ : ಕೊರೋನಾ ಪರೀಕ್ಷಾ ವರದಿ ಬಂದ ಬಳಿಕ ಮೃತದೇಹ ವಾರೀಸುದಾರರಿಗೆ ಹಸ್ತಾಂತರ



ವಿಟ್ಲ (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪತ್ನಿ ರುಕಿಯಾ (65) ಅವರು ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಶನಿವಾರ ಮಧ್ಯರಾತ್ರಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಆರೋಗ್ಯವು ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮಧ್ಯರಾತ್ರಿ ವೇಳೆಗೆ ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಇದೀಗ ಕೊರೋನಾ ವೈರಸ್ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಮೃತರು ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಸಹಕಾರ ನೀಡಬೇಕು, ಯಾರೂ ಕೂಡಾ ಅಲ್ಲಲ್ಲಿ ಗುಂಪು ಸೇರಬಾರದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ವಿಟ್ಲ ಠಾಣಾಧಿಕಾರಿ ವಿನೋದ್ ಎಸ್ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ನೆಟ್ಲಮುಡ್ನೂರು ನಿವಾಸಿ ರುಕಿಯಾ ನಿಧನ : ಕೊರೋನಾ ಪರೀಕ್ಷಾ ವರದಿ ಬಂದ ಬಳಿಕ ಮೃತದೇಹ ವಾರೀಸುದಾರರಿಗೆ ಹಸ್ತಾಂತರ Rating: 5 Reviewed By: karavali Times
Scroll to Top