ದುಬೈಯಿಂದ ಬಂತು 2ನೇ ವಿಶೇಷ ವಿಮಾನ : ಮತ್ತೆ 177 ಮಂದಿ ತಾಯ್ನಾಡಿಗೆ - Karavali Times ದುಬೈಯಿಂದ ಬಂತು 2ನೇ ವಿಶೇಷ ವಿಮಾನ : ಮತ್ತೆ 177 ಮಂದಿ ತಾಯ್ನಾಡಿಗೆ - Karavali Times

728x90

18 May 2020

ದುಬೈಯಿಂದ ಬಂತು 2ನೇ ವಿಶೇಷ ವಿಮಾನ : ಮತ್ತೆ 177 ಮಂದಿ ತಾಯ್ನಾಡಿಗೆ



ಮಂಗಳೂರು (ಕರಾವಳಿ ಟೈಮ್ಸ್) : ಕರಾವಳಿ ಕನ್ನಡಿಗರನ್ನು ಹೊತ್ತುಕೊಂಡು ಯುಎಇ ದೇಶದ ದುಬೈನಿಂದ ಎರಡನೇ ವಿಶೇಷ ವಿಮಾನ ಸೋಮವಾರ ತಾರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

    ಸೋಮವಾರ ಸಂಜೆ 7.45ಕ್ಕೆ ಮಂಗಳೂರು ತಲುಪಿದ ವಿಮಾನದಲ್ಲಿ ಶಿಶು, ಗರ್ಭಿಣಿಯರು ಸೇರಿದಂತೆ 99 ಮಂದಿ ಪುರುಷರ ಹಾಗೂ 67 ಮಂದಿ ಮಹಿಳಾ ಪ್ರಯಾಣಿಕರು ಹಾಗೂ 11 ಮಂದಿ ಮಕ್ಕಳ ಸಹಿತ ಒಟ್ಟು 177 ಮಂದಿ ಪ್ರಯಾಣಿಕರಿದ್ದರು. ವಿಮಾನ ನಿಲ್ದಾಣದಲ್ಲಿ ಪ್ರತೀ ಪ್ರಯಾಣಿಕರ ಸ್ಕ್ರೀನಿಂಗ್ ಕಾರ್ಯ ನಡೆಸಲಾಯಿತು.

    ಪ್ರಯಾಣಿಕರು ವಿಮಾನದಿಂದ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ಅಲ್ಲದೆ ಆಗಮಿಸಿದ ಪ್ರಯಾಣಿಕರಿಗೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ.

    ಮೇ 12 ರಂದು ಮೊದಲ ವಿಶೇಷ ವಿಮಾನ ಆಗಮಿಸಿದ ಸಂದರ್ಭ ನಿಲ್ದಾಣದಲ್ಲಿ ಉಂಟಾದ ಕೆಲ ಗೊಂದಲದ ಪರಿಸ್ಥಿತಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದ ಹಿನ್ನಲೆಯಲ್ಲಿ ಈ ಬಾರಿ ವಿಮಾನ ನಿಲ್ದಾಣದಲ್ಲಿ  ಸ್ವತಃ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಪೆÇ್ರಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದು, ವ್ಯವಸ್ಥೆಯ ನೇತೃತ್ವ ವಹಿಸಿದ್ದರು.

    ಮೇ 12 ರಂದು ಉಂಟಾದ ಗೊಂದಲಗಳು ಈ ಬಾರಿ ಜಿಲ್ಲಾಡಳಿತ ಸರಿಪಡಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಜಿಲ್ಲಾಡಳಿತವೇ ವ್ಯವಸ್ಥೆಗೊಳಿಸಿದ ಬಸ್ಸುಗಳಲ್ಲಿ ರವಾನಿಸುವ ಕಾರ್ಯ ಸುಸೂತ್ರವಾಗಿ ನಡೆಯುತ್ತಿವೆ. ಮಂಗಳವಾರ ಎಲ್ಲ ಪ್ರಯಾಣಿಕರ ಗಂಟಲ ದ್ರವ ಪರೀಕ್ಷೆ ನಡೆಯಲಿದೆ.
  • Blogger Comments
  • Facebook Comments

0 comments:

Post a Comment

Item Reviewed: ದುಬೈಯಿಂದ ಬಂತು 2ನೇ ವಿಶೇಷ ವಿಮಾನ : ಮತ್ತೆ 177 ಮಂದಿ ತಾಯ್ನಾಡಿಗೆ Rating: 5 Reviewed By: karavali Times
Scroll to Top