ಹೊಸದಾಗಿ ಅರ್ಜಿ ಸಲ್ಲಿಸಿದ ಬಿಎಪಿಎಲ್/ ಎಪಿಎಲ್ ಕುಟುಂಬಿಕರೂ ಪಡಿತರ ಪಡೆಯಲು ಅರ್ಹರು : ಹಾಶೀರ್ ಪೇರಿಮಾರ್ - Karavali Times ಹೊಸದಾಗಿ ಅರ್ಜಿ ಸಲ್ಲಿಸಿದ ಬಿಎಪಿಎಲ್/ ಎಪಿಎಲ್ ಕುಟುಂಬಿಕರೂ ಪಡಿತರ ಪಡೆಯಲು ಅರ್ಹರು : ಹಾಶೀರ್ ಪೇರಿಮಾರ್ - Karavali Times

728x90

1 May 2020

ಹೊಸದಾಗಿ ಅರ್ಜಿ ಸಲ್ಲಿಸಿದ ಬಿಎಪಿಎಲ್/ ಎಪಿಎಲ್ ಕುಟುಂಬಿಕರೂ ಪಡಿತರ ಪಡೆಯಲು ಅರ್ಹರು : ಹಾಶೀರ್ ಪೇರಿಮಾರ್



ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಇಲಾಖೆಯ ವತಿಯಿಂದ ಹೊಸದಾಗಿ ಬಿಪಿಎಲ್/ ಎಪಿಎಲ್ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮತ್ತು ಪಡಿತರ ಬೇಕು ಎಂದು ಸಮ್ಮತಿ ಸಲ್ಲಿಸದ ಎಪಿಎಲ್ (APL Willingness) ಫಲಾನುಭವಿಗಳಿಗೆ ಬಿಡುಗಡೆಯಾದ ಆಹಾರ ಧ್ಯಾನವನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಮೇ 2 ಶನಿವಾರ (ಇಂದಿನಿಂದ) ದಿಂದ ಪ್ರಾರಂಭವಾಗುತ್ತದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪುದು ಗ್ರಾ.ಪಂ. ಸದಸ್ಯ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಗ್ರಾಹಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಅಂತ್ಯೋದಯ, ಬಿಪಿಎಲ್, ಹೊಸದಾಗಿ ಬಿಪಿಎಲ್ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಿಸಲಾಗುತ್ತದೆ. APL Willingness ಸಲ್ಲಿಸದ ಮತ್ತು ಹೊಸದಾಗಿ ಎಪಿಎಲ್ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಕೆ.ಜಿ.ಗೆ ರೂ. 15/-ರಂತೆ ಪಡಿತರ ವಿತರಿಸಲಾಗುತ್ತದೆ. ಎಲ್ಲಾ ಫಲಾನುಭವಿಗಳು ಇದನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಪೆÇೀರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ / ಅರ್ಜಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಹೊಸದಾಗಿ ಅರ್ಜಿ ಸಲ್ಲಿಸಿದ ಬಿಎಪಿಎಲ್/ ಎಪಿಎಲ್ ಕುಟುಂಬಿಕರೂ ಪಡಿತರ ಪಡೆಯಲು ಅರ್ಹರು : ಹಾಶೀರ್ ಪೇರಿಮಾರ್ Rating: 5 Reviewed By: karavali Times
Scroll to Top