ತಂಡದಿಂದ ಯುವಕರ ಮೇಲೆ ತಲವಾರು ದಾಳಿ : ಓರ್ವ ಮೃತ್ಯು, ಇಬ್ಬರು ಗಂಭೀರ - Karavali Times ತಂಡದಿಂದ ಯುವಕರ ಮೇಲೆ ತಲವಾರು ದಾಳಿ : ಓರ್ವ ಮೃತ್ಯು, ಇಬ್ಬರು ಗಂಭೀರ - Karavali Times

728x90

31 May 2020

ತಂಡದಿಂದ ಯುವಕರ ಮೇಲೆ ತಲವಾರು ದಾಳಿ : ಓರ್ವ ಮೃತ್ಯು, ಇಬ್ಬರು ಗಂಭೀರ


ಕಟೀಲು ಬಳಿ ಇಂದು ನಡೆದ ಘಟನೆ



ಮಂಗಳೂರು (ಕರಾವಳಿ ಟೈಮ್ಸ್) : ತಂಡವೊಂದು ಮೂವರು ಯುವಕರ ಮೇಲೆ ತಲವಾರು ದಾಳಿ ನಡೆಸಿದ ಪರಿಣಾಮ ಓರ್ವ ಯುವಕ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ಮೂಡಬಿದ್ರೆ ತಾಲೂಕಿನ ಕಟೀಲು ಸಮೀಪದ ಎಕ್ಕಾರು-ದೇವರಗುಡ್ಡೆ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು  ಮಂಗಳೂರು ಸಮೀಪದ ಮರಕಡ ನಿವಾಸಿ ಕೀರ್ತನ್ (20) ಎಂದು ಹೆಸರಿಸಲಾಗಿದೆ. ಗಾಯಾಳುಗಳನ್ನು ಇಲ್ಲಿನ ನಿವಾಸಿಗಳಾದ ನಿತಿನ್ (20) ಹಾಗೂ ಮಣೇಶ್ (20) ಎಂದು ಗುರುತಿಸಲಾಗಿದೆ.

ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಕ್ರಮ ಮರಳುಗಾರಿಕೆಯ ದ್ವೇಷದಿಂದ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗಾಂಜಾ‌ ವ್ಯಸನಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಬಜಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ತಂಡದಿಂದ ಯುವಕರ ಮೇಲೆ ತಲವಾರು ದಾಳಿ : ಓರ್ವ ಮೃತ್ಯು, ಇಬ್ಬರು ಗಂಭೀರ Rating: 5 Reviewed By: karavali Times
Scroll to Top