ವಿಟ್ಲ (ಕರಾವಳಿ ಟೈಮ್ಸ್) : ಅಪ್ರಾಪ್ತ ಹುಡುಗನ ಮೇಲೆ ವಿಟ್ಲದ ಬಜರಂಗ ದಳದ ಮುಖಂಡ ದಿನೇಶ್ ಕನ್ಯಾನ ಎಂಬವನು ಹಲ್ಲೆ ನಡೆಸಿ ನಿಂದಿಸುವ ವೀಡಿಯೋ ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ತನಿಖೆ ನಡೆಸಿ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಬಂಧನ ಮಾಡಬೇಕಾಗಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಒತ್ತಾಯಿಸಿದೆ.
ಹಲ್ಲೆಗೆ ಒಳಗಾದ ಬಾಲಕನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಹಾಗೂ ಇಂತಹ ಘಟನೆಗಳಿಂದ ಕೋಮುಗಲಭೆಗಳು ಸೃಷ್ಟಿ ಯಾಗಲು ಕಾರಣವಾಗುತ್ತಿದ್ದು, ಕೂಡಲೇ ಇಂತಹ ರೌಡಿ ಶೀಟರ್ ಗಳನ್ನು ಬಂಧಿಸಿ ಸಮಾಜದ ನೆಮ್ಮದಿ ಕಾಪಾಡಬೇಕೆಂದು ವಿಟ್ಲ ಪೋಲಿಸರನ್ನು ಡಿ.ವೈ.ಎಫ್.ಐ
ಅಧ್ಯಕ್ಷ ನಿಜುಂ ಅಳಿಕೆ, ಕಾರ್ಯದರ್ಶಿ ಜಮೀಲ್ ಎಂ ಅವರು ಆಗ್ರಹಿಸಿದ್ದಾರೆ.
0 comments:
Post a Comment