ಉಳ್ಳಾಲದಲ್ಲಿ ಹೆಚ್ಚಿದ ಕೊರೋನಾ ಸೋಂಕು : ರ್ಯಾಂಡಂ ಟೆಸ್ಟ್‍ಗೆ ನಿರ್ಧಾರ, ಸ್ಯಾನಿಟೈಸರ್ ಸಿಂಪಡಣೆ, ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ - Karavali Times ಉಳ್ಳಾಲದಲ್ಲಿ ಹೆಚ್ಚಿದ ಕೊರೋನಾ ಸೋಂಕು : ರ್ಯಾಂಡಂ ಟೆಸ್ಟ್‍ಗೆ ನಿರ್ಧಾರ, ಸ್ಯಾನಿಟೈಸರ್ ಸಿಂಪಡಣೆ, ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ - Karavali Times

728x90

27 June 2020

ಉಳ್ಳಾಲದಲ್ಲಿ ಹೆಚ್ಚಿದ ಕೊರೋನಾ ಸೋಂಕು : ರ್ಯಾಂಡಂ ಟೆಸ್ಟ್‍ಗೆ ನಿರ್ಧಾರ, ಸ್ಯಾನಿಟೈಸರ್ ಸಿಂಪಡಣೆ, ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ








ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ವರದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತ ಪ್ರದೇಶದಲ್ಲಿ ರ್ಯಾಂಡಂ ಟೆಸ್ಟ್ ನಡೆಸಲು ಇಲ್ಲಿನ ನಗರಸಭೆ ನಿರ್ಧರಿಸಿದೆ. ಪ್ರದೇಶದಾದ್ಯಂತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ ಹೇರಲಾಗಿದೆ.

ಶಾಸಕ ಯು.ಟಿ. ಖಾದರ್ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರ ಸಭೆ ನಡೆಸಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಉಳ್ಳಾಲದಲ್ಲಿ ಓರ್ವ ವೃದ್ಧ ಮಹಿಳೆ ಕೊರೊನಾದಿಂದ ಸಾವನ್ನಪ್ಪಿದ್ದು, ಜೊತೆಗೆ ಇಬ್ಬರು ಪೆÇಲೀಸರು ಸೇರಿ ಐದು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಇಲ್ಲಿನ ನಾಗರಿಕರಲ್ಲಿ ಆತಂಕ ಉಂಟಾಗಿದೆ.

ಕೊರೋನಾ ಹೆಚ್ಚಾಗಿರುವ ಹಿನ್ನಲೆಯಲ್ಲಿ ರ್ಯಾಂಡಂ ಟೆಸ್ಟ್‍ಗೆ ನಿರ್ಧರಿಸಲಾಗಿದ್ದು, ಉಳ್ಳಾಲದ ಮೀನುಗಾರರು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ಸೇರಿ ಎಲ್ಲರ ರ್ಯಾಂಡಂ ಟೆಸ್ಟ್ ನಡೆಸಲಾಗುವುದು. ಇದರೊಂದಿಗೆ ಸೋಂಕು ಹೆಚ್ಚಿರುವ ಪ್ರದೇಶದ ಪ್ರಾರ್ಥನಾಲಯಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸುವುದನ್ನೂ ಸ್ಥಗಿತಗೊಳಿಸಲಾಗಿದೆ.









  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲದಲ್ಲಿ ಹೆಚ್ಚಿದ ಕೊರೋನಾ ಸೋಂಕು : ರ್ಯಾಂಡಂ ಟೆಸ್ಟ್‍ಗೆ ನಿರ್ಧಾರ, ಸ್ಯಾನಿಟೈಸರ್ ಸಿಂಪಡಣೆ, ಸಾಮೂಹಿಕ ಪ್ರಾರ್ಥನೆಗಳಿಗೆ ನಿಷೇಧ Rating: 5 Reviewed By: karavali Times
Scroll to Top