ಜುಲೈ 31 ರಂದು ಬಕ್ರೀದ್ ಹಬ್ಬ : ಖಾಝಿಗಳ ಘೋಷಣೆ - Karavali Times ಜುಲೈ 31 ರಂದು ಬಕ್ರೀದ್ ಹಬ್ಬ : ಖಾಝಿಗಳ ಘೋಷಣೆ - Karavali Times

728x90

21 July 2020

ಜುಲೈ 31 ರಂದು ಬಕ್ರೀದ್ ಹಬ್ಬ : ಖಾಝಿಗಳ ಘೋಷಣೆ



ಕೊಲ್ಲಿ ರಾಷ್ಟ್ರ ಸೌದಿಯಲ್ಲೂ ಶುಕ್ರವಾರವೆ ಬಕ್ರೀದ್ : ನಿನ್ನೆಯಷ್ಟೆ ಘೋಷಣೆಯಾಗಿತ್ತು


ಮಂಗಳೂರು (ಕರಾವಳಿ ಟೈಮ್ಸ್) : ಮಂಗಳವಾರ ಅಸ್ತ ಬುಧವಾರ ರಾತ್ರಿ ದುಲ್ ಹಜ್ಜ್ ತಿಂಗಳ ಮೊದಲ ದಿನದ ಚಂದ್ರದರ್ಶನ ಆಗಿರುವುದು ಖಾತ್ರಿಯಾದ ಹಿನ್ನಲೆಯಲ್ಲಿ ಜುಲೈ 31 ಶುಕ್ರವಾರ ಈದುಲ್ ಅಝ್ ಹಾ (ಬಕ್ರೀದ್) ಹಬ್ಬ ಆಚರಿಸಲು ಕರಾವಳಿ ಜಿಲ್ಲೆಗಳ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಕೂರತ್ ತಂಞಳ್ ಹಾಗೂ ಶೈಖುನಾ ಬೇಕಲ್ ಉಸ್ತಾದ್ ಅವರುಗಳು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಜುಲೈ 30 ರಂದು ಗುರುವಾರ ಅರಫಾ ಉಪವಾಸ ಆಚರಿಸುವಂತೆಯೂ ಇದೇ ವೇಳೆ ಖಾಝಿಗಳು ಕರೆ ನೀಡಿದ್ದಾರೆ.

ಸೋಮವಾರ ರಾತ್ರಿ ಚಂದ್ರದರ್ಶನ ಆಗದ ಹಿನ್ನಲೆಯಲ್ಲಿ ನಿನ್ನೆಯಷ್ಟೆ ಸೌದಿ ಅರೇಬಿಯಾ ಚಂದ್ರದರ್ಶನ ಸಮಿತಿಯು ಸೌದಿ ಅರೇಬಿಯಾದಲ್ಲಿ ಜುಲೈ 31 ರಂದು ಶುಕ್ರವಾರ ಈದುಲ್ ಅಝ್ ಹಾ ಆಚರಿಸುವಂತೆ ಕರೆ ನೀಡಿತ್ತು. ಇದೀಗ ಕರಾವಳಿ ಜಿಲ್ಲೆಗಳಲ್ಲೂ ಜುಲೈ 31 ರಂದು ಬಕ್ರೀದ್ ಹಬ್ಬ ಘೋಷಣೆಯಾಗಿದ್ದು, ಕೊಲ್ಲಿ ಹಾಗೂ ಕರಾವಳಿಯಲ್ಲಿ ಒಂದೇ ದಿನ ಹಬ್ಬ ಆಚರಣೆ ನಡೆಯುವುದು ಖಾತ್ರಿಯಾಗಿದೆ.








  • Blogger Comments
  • Facebook Comments

0 comments:

Post a Comment

Item Reviewed: ಜುಲೈ 31 ರಂದು ಬಕ್ರೀದ್ ಹಬ್ಬ : ಖಾಝಿಗಳ ಘೋಷಣೆ Rating: 5 Reviewed By: karavali Times
Scroll to Top