ತಲೆಮೊಗರು : ತಹಶೀಲ್ದಾರ್ ಮುಟ್ಟುಗೋಲು ಹಾಕಿದ್ದ ಮರಳು ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಹಿಡಿದ ಅಧಿಕಾರಿಗಳು - Karavali Times ತಲೆಮೊಗರು : ತಹಶೀಲ್ದಾರ್ ಮುಟ್ಟುಗೋಲು ಹಾಕಿದ್ದ ಮರಳು ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಹಿಡಿದ ಅಧಿಕಾರಿಗಳು - Karavali Times

728x90

28 July 2020

ತಲೆಮೊಗರು : ತಹಶೀಲ್ದಾರ್ ಮುಟ್ಟುಗೋಲು ಹಾಕಿದ್ದ ಮರಳು ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಹಿಡಿದ ಅಧಿಕಾರಿಗಳು



ಮಾಫಿಯಾಗಳ ವಿವರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸ್ಥಳೀಯರು

 
ಬಂಟ್ವಾಳ (ಕರಾವಳಿ ಟೈಮ್ಸ್) :  ತಾಲೂಕಿನ ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಜುಲೈ 6 ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಗೋಣಿ ಚೀಲದಲ್ಲಿ ಅಕ್ರಮವಾಗಿ ತುಂಬಿಸಿಟ್ಟಿದ್ದ ಸುಮಾರು ಸಾವಿರಕ್ಕೂ ಅಧಿಕ ಚೀಲ ಮರಳುಗಳನ್ನು ಜಪ್ತಿ ಮಾಡಿದ್ದರು. ಆದರೆ ತಹಶೀಲ್ದಾರ್ ಸೀಝ್ ಮಾಡಿದ ಮರಳು ಚೀಲಗಳನ್ನು ಕೂಡಾ ಮಾಫಿಯಾಗಳು ರಾತ್ರೋ ರಾತ್ರಿ ಕಳ್ಳತನ ಮಾಡುತ್ತಿದ್ದರು. ಈ ಬಗ್ಗೆ ಮತ್ತೆ ಸಾರ್ವಜನಿಕರು ತಾಲೂಕಾಡಳಿತಕ್ಕೆ ದೂರಿಕೊಂಡ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ದಾಳಿ ನಡೆಸಿದ ತಹಶೀಲ್ದಾರ್ ರಶ್ಮಿ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದ ತಂಡ ಮರಳು ಕಳ್ಳತನಗೈಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಪಿಕಪ್ ಚಾಲಕನನ್ನು ಬಂಧಿಸಿದ್ದಾರೆ. 

ತಲೆಮೊಗರು ನೇತ್ರಾವತಿ ನದಿ ತಟದಲ್ಲಿ ಹೈಕೋರ್ಟ್ ತಡೆಯಾಜ್ಞೆ ಉಲ್ಲಂಘಿಸಿ ಕಳೆದ ಹಲವು ಸಮಯಗಳಿಂದ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ಸ್ಥಳೀಯವಾಗಿ ಆಗುತ್ತಿದ್ದ ತೊಂದರೆ ಬಗ್ಗೆ ಹೇಳಿಕೊಂಡರೆ ಗೂಂಡಾ ಪಡೆಗಳ ಮೂಲಕ ಜನರನ್ನು ಹೆದರಿಸಿ ತಹಬಂದಿಗೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದ್ದು, ಇದರಿಂದ ನೊಂದ ಗ್ರಾಮಸ್ಥರು ತಾಲೂಕು ತಹಶೀಲ್ದಾರ್ ಗೆ ಲಿಖಿತವಾಗಿ ದೂರಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳು ಸ್ಥಳದಲ್ಲಿ ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು 1000 ಕ್ಕೂ ಅಧಿಕ ಗೋಣಿ ಮರಳನ್ನು ಮುಟ್ಟುಗೋಲು ಹಾಕಿದ್ದರು. ಈ ಪೈಕಿ ಸುಮಾರು 800ಕ್ಕೂ ಅಧಿಕ ಚೀಲ ಮರಳನ್ನು ಸ್ಥಳೀಯ ಮಾಫಿಯಾ ಕೈವಾಡದಿಂದ ಕಳವುಗೈಯಲಾಗಿತ್ತು. ಈ ಬಗ್ಗೆ ಪತ್ರಿಕೆ ಜು 11 ರಂದು ಸಮಗ್ರ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸಿತ್ತು. 

ಈ ಬಗ್ಗೆ ಸ್ಥಳೀಯರು ದೂರಿಕೊಂಡ ಹಿನ್ನಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಪ್ರಕರಣ ಬೇಧಿಸಿದ್ದು, ಪಿಕಪ್ ಚಾಲಕ ಕಾಸಿಂ ಎಂಬಾತನನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಇದರ ಹಿಂದೆ 
ಸ್ಥಳೀಯ ನಿವಾಸಿಗಳಾದ ಅಶ್ರಫ್, ರಿಯಾಝ್, ಪಾರಿಶ್ ಹಾಗೂ ಅಲ್ತಾಫ್ ಮೊದಲಾದವರ ಕೈವಾಡ ಇದ್ದು, ಈ ಬಗ್ಗೆ ತನಿಖೆ ನಡೆಸುವ ಮೂಲಕ ಇಲ್ಲಿನ ಇಡೀ ಮರಳು ಮಾಫಿಯಾವನ್ನು ನಿಯಂತ್ರಿಸುವಂತೆ ಮಾಹಿತಿ ನೀಡಿ ಆಗ್ರಹಿಸಿದ್ದಾರೆ. ಇದೀಗ ಪ್ರಕರಣ ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಹಸ್ತಾಂತರವಾಗಿದ್ದು, ಅಲ್ಲಿ ಏನಾದರೂ ನಡೀತದೋ ಅಥವಾ ಸಮಗ್ರ ತನಿಖೆ ನಡೀತದಾ ಕಾದುನೋಡಬೇಕಷ್ಟೆ ಎಂದು ಊರ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.  








  • Blogger Comments
  • Facebook Comments

0 comments:

Post a Comment

Item Reviewed: ತಲೆಮೊಗರು : ತಹಶೀಲ್ದಾರ್ ಮುಟ್ಟುಗೋಲು ಹಾಕಿದ್ದ ಮರಳು ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಹಿಡಿದ ಅಧಿಕಾರಿಗಳು Rating: 5 Reviewed By: karavali Times
Scroll to Top