ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿ ಕೈ ಕಾರ್ಯಕರ್ತರಿಂದ ಬೆಳ್ತಂಗಡಿ ಶಾಸಕರ ಕಛೇರಿಗೆ ಮುತ್ತಿಗೆ ಯತ್ನ - Karavali Times ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿ ಕೈ ಕಾರ್ಯಕರ್ತರಿಂದ ಬೆಳ್ತಂಗಡಿ ಶಾಸಕರ ಕಛೇರಿಗೆ ಮುತ್ತಿಗೆ ಯತ್ನ - Karavali Times

728x90

24 August 2020

ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿ ಕೈ ಕಾರ್ಯಕರ್ತರಿಂದ ಬೆಳ್ತಂಗಡಿ ಶಾಸಕರ ಕಛೇರಿಗೆ ಮುತ್ತಿಗೆ ಯತ್ನ

 

ಬೆಳ್ತಂಗಡಿ (ಕರಾವಳಿ ಟೈಮ್ಸ್) : ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಬಗ್ಗೆ ಲೆಕ್ಕ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಛೇರಿಗೆ ಸೋಮವಾರ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಮಾಜಿ ಶಾಸಕ ವಸಂತ ಬಂಗೇರಾ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಬೆಳ್ತಂಗಡಿ ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಲೆಕ್ಕ ನೀಡುವಂತೆ ಆಗ್ರಹಿಸಿದರು. ಮುತ್ತಿಗೆ ಯತ್ನದ ವೇಳೆ ಮಾಜಿ ಶಾಸಕ ವಸಂತ ಬಂಗೇರಾ ಹಾಗೂ ಪೆÇಲೀಸರ ಮಧ್ಯೆ ಚಕಮಕಿಯೂ ನಡೆದಿದೆ. ಶಾಸಕರ ಕಚೇರಿಯ ಗೇಟ್ ಬಳಿ ಪ್ರತಿಭಟನಾಕರರನ್ನು ಪೆÇಲೀಸರು ತಡೆದಿದ್ದಾರೆ.

15 ದಿನಗಳ ಒಳಗೆ ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೊಡದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಮಾಜಿ ಶಾಸಕ ವಸಂತ ಬಂಗೇರ ಎಚ್ಚರಿಕೆ ನೀಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಕಳೆದ ವರ್ಷ ಪ್ರವಾಹದ ಸಂದರ್ಭ ಕಾಳಜಿ ರಿಲೀಫ್ ಫಂಡ್ ಸ್ಥಾಪನೆ ಮಾಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿತ್ತು.






  • Blogger Comments
  • Facebook Comments

0 comments:

Post a Comment

Item Reviewed: ಪ್ರವಾಹ ಸಂತ್ರಸ್ತರ ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿ ಕೈ ಕಾರ್ಯಕರ್ತರಿಂದ ಬೆಳ್ತಂಗಡಿ ಶಾಸಕರ ಕಛೇರಿಗೆ ಮುತ್ತಿಗೆ ಯತ್ನ Rating: 5 Reviewed By: karavali Times
Scroll to Top