ಕೊರೋನಾ ಬಾಧಿತ ಜನತೆಗೆ ಸ್ಪಂದಿಸಬೇಕಾದ ಸರಕಾರ ಭಾವನಾತ್ಮಕ ವಿಚಾರಗಳನ್ನು ವೈಭವೀಕರಿಸುತ್ತಿದೆ : ಕೇಂದ್ರ ಸರಕಾರದ ವಿರುದ್ದ ಸಿಪಿಐ(ಎಂ) ಆಕ್ರೋಶ - Karavali Times ಕೊರೋನಾ ಬಾಧಿತ ಜನತೆಗೆ ಸ್ಪಂದಿಸಬೇಕಾದ ಸರಕಾರ ಭಾವನಾತ್ಮಕ ವಿಚಾರಗಳನ್ನು ವೈಭವೀಕರಿಸುತ್ತಿದೆ : ಕೇಂದ್ರ ಸರಕಾರದ ವಿರುದ್ದ ಸಿಪಿಐ(ಎಂ) ಆಕ್ರೋಶ - Karavali Times

728x90

23 August 2020

ಕೊರೋನಾ ಬಾಧಿತ ಜನತೆಗೆ ಸ್ಪಂದಿಸಬೇಕಾದ ಸರಕಾರ ಭಾವನಾತ್ಮಕ ವಿಚಾರಗಳನ್ನು ವೈಭವೀಕರಿಸುತ್ತಿದೆ : ಕೇಂದ್ರ ಸರಕಾರದ ವಿರುದ್ದ ಸಿಪಿಐ(ಎಂ) ಆಕ್ರೋಶ




ಮಂಗಳೂರು (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಿಪಿಐಎಂ ನೇತೃತ್ವದಲ್ಲಿ ದೇಶದಾದ್ಯಂತ ಆಗಸ್ಟ್ 20 ರಿಂದ 29ರವರೆಗೆ  ನಡೆಯುತ್ತಿರುವ ಪ್ರತಿಭಟನಾ ಸಪ್ತಾಹದ ಅಂಗವಾಗಿ ಭಾನುವಾರ ಕುತ್ತಾರ್-ತೇವುಲದಲ್ಲಿ ಪ್ರತಿಭಟನಾ ಸಭೆ ನಡೆಯಿತು. 

ಸಿಪಿಐಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಮೋದಿ ಸರಕಾರ ತನ್ನ ಜನ ವಿರೋಧಿ ನೀತಿಗಳ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದು, ಸಾರ್ವಜನಿಕ ಉದ್ಯಮಗಳನ್ನು ಖಾಸಗೀ ಬಂಡವಾಳ ಶಾಹಿಗಳ ಕೈಗೆ ನೀಡುತ್ತಿದ್ದಾರೆ. ಅಲ್ಲದೆ ಕೊರೋನಾ ಸಂಕಷ್ಟದ ಕಾಲದಲ್ಲಿ ಜನರ ಕಣ್ಣೊರೆಸಬೇಕಾದ ಸರಕಾರ ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಜನರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಸಿಪಿಐಎಂ ಪಕ್ಷ  18 ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟು ತಕ್ಷಣ ಸ್ಪಂದಿಸುವಂತೆ ಆಗ್ರಹಿಸಲಾಯಿತು. 

ಸಿಪಿಐಎಂ ತೇವುಲ ಶಾಖಾ ಕಾರ್ಯದರ್ಶಿ ಚಂದ್ರಹಾಸ್ ಡಿ, ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಕಮ್ಯುನಿಸ್ಟ್ ಪ್ರಮುಖರಾದ ಜಯಂತ್ ನಾಯ್ಕ್, ಮಹಾಬಲ್ ಟಿ, ವಿಶ್ವನಾಥ್ ತೇವುಲ, ಜಯರಾಮ್ ತೇವುಲ, ಶೇಖರ್ ಕುಂದರ್, ಸತೀಶ್ ಕುಲಾಲ್,  ಸುನೀಲ್ ತೇವುಲ, ಜೀವನ್ ರಾಜ್, ಸುರೇಶ್ ತಲೆನೀರು, ಭರತ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 






  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ಬಾಧಿತ ಜನತೆಗೆ ಸ್ಪಂದಿಸಬೇಕಾದ ಸರಕಾರ ಭಾವನಾತ್ಮಕ ವಿಚಾರಗಳನ್ನು ವೈಭವೀಕರಿಸುತ್ತಿದೆ : ಕೇಂದ್ರ ಸರಕಾರದ ವಿರುದ್ದ ಸಿಪಿಐ(ಎಂ) ಆಕ್ರೋಶ Rating: 5 Reviewed By: karavali Times
Scroll to Top