ಕುಕ್ಕಾಜೆ-ಕಾಪಿಕಾಡ್ ಸುನ್ನೀ ಸೆಂಟರ್ ವತಿಯಿಂದ ಮುಹರ್ರಂ ಸಂದೇಶ - Karavali Times ಕುಕ್ಕಾಜೆ-ಕಾಪಿಕಾಡ್ ಸುನ್ನೀ ಸೆಂಟರ್ ವತಿಯಿಂದ ಮುಹರ್ರಂ ಸಂದೇಶ - Karavali Times

728x90

27 August 2020

ಕುಕ್ಕಾಜೆ-ಕಾಪಿಕಾಡ್ ಸುನ್ನೀ ಸೆಂಟರ್ ವತಿಯಿಂದ ಮುಹರ್ರಂ ಸಂದೇಶ

 




ಬಂಟ್ವಾಳ (ಕರಾವಳಿ ಟೈಮ್ಸ್) : ಕುಕ್ಕಾಜೆ-ಕಾಪಿಕಾಡ್ ಸುನ್ನೀ ಸೆಂಟರ್ ವತಿಯಿಂದ ಮುಹರ್ರಂ ಸಂದೇಶ ಕಾರ್ಯಕ್ರಮ ಬುಧವಾರ ರಾತ್ರಿ ಇಲ್ಲಿನ ಸುನ್ನೀ ಸೆಂಟರ್ ಕಛೇರಿಯಲ್ಲಿ ನಡೆಯಿತು. 

ಸಯ್ಯಿದ್ ಚಟ್ಟೆಕ್ಕಲ್ ತಂಙಳ್ ದುವಾ ನೆರವೇರಿಸಿದರು. ಟಿ.ಯು.ಸಿ.ಎಸ್. ಅಧ್ಯಕ್ಷ ಮುಹಮ್ಮದ್ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಉದ್ಘಾಟಿಸಿದರು. ಕುಕ್ಕಾಜೆ ಎಸ್.ವೈ.ಎಸ್. ಅಧ್ಯಕ್ಷ ಮಹ್ಮೂದ್ ಸಅದಿ ವಿಷಯ ಮಂಡಿಸಿದರು. 

ಕೆ.ಸಿ.ಎಫ್. ಸದಸ್ಯ ಅಬ್ಬಾಸ್ ಹಾಜಿ ಕಾಪಿಕಾಡ್, ಇರಾ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಕುಕ್ಕಾಜೆ ಎಸ್.ಎಸ್.ಎಫ್. ಅಧ್ಯಕ್ಷ ಮುಹಮ್ಮದ್ ಶರೀಫ್, ಬದ್ರುದ್ದೀನ್ ಹಾಜಿ ಕುಕ್ಕಾಜೆ, ಕೆ. ಉಸ್ಮಾನ್ ಕುಕ್ಕಾಜೆ ಮೊದಲಾದವರು ಭಾಗವಹಿಸಿದ್ದರು. 

ಕುಕ್ಕಾಜೆ ಎಸ್.ವೈ.ಎಸ್. ಕಾರ್ಯದರ್ಶಿ ಕೆ.ಎಂ. ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿ, ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಕಾಪಿಕಾಡ್ ವಂದಿಸಿದರು. 








  • Blogger Comments
  • Facebook Comments

0 comments:

Post a Comment

Item Reviewed: ಕುಕ್ಕಾಜೆ-ಕಾಪಿಕಾಡ್ ಸುನ್ನೀ ಸೆಂಟರ್ ವತಿಯಿಂದ ಮುಹರ್ರಂ ಸಂದೇಶ Rating: 5 Reviewed By: karavali Times
Scroll to Top