ಸೂರಿಕುಮೇರು : ದ್ವಿತೀಯ ಹಂತದ ಉಚಿತ ಆಯುಷ್ಮಾನ್ ನೋಂದಣಿ ಹಾಗೂ ಕಾರ್ಡ್ ವಿತರಣೆ - Karavali Times ಸೂರಿಕುಮೇರು : ದ್ವಿತೀಯ ಹಂತದ ಉಚಿತ ಆಯುಷ್ಮಾನ್ ನೋಂದಣಿ ಹಾಗೂ ಕಾರ್ಡ್ ವಿತರಣೆ - Karavali Times

728x90

2 September 2020

ಸೂರಿಕುಮೇರು : ದ್ವಿತೀಯ ಹಂತದ ಉಚಿತ ಆಯುಷ್ಮಾನ್ ನೋಂದಣಿ ಹಾಗೂ ಕಾರ್ಡ್ ವಿತರಣೆ




ಬಂಟ್ವಾಳ (ಕರಾವಳಿ ಟೈಮ್ಸ್) : ಮಾಣಿ ವಲಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಇವುಗಳ ಜಂಟಿ ಆಶ್ರಯದಲ್ಲಿ ದ್ವಿತೀಯ ಹಂತದ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೊಂದಣಿ ಶಿಬಿರ ಮತ್ತು ಕಾರ್ಡ್ ವಿತರಣಾ  ಸಮಾರಂಭ ಸೂರಿಕುಮೇರಿನಲ್ಲಿ ಜರಗಿತು. ಮಾಜಿ ಸಚಿವ ಬಿ ರಮಾನಾಥ ರೈ ಫಲಾನುಭವಿಗಳಗೆ ಕಾರ್ಡ್ ವಿತರಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಸೂರಿಕುಮೇರು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಕರೀಂ, ಪ್ರಮುಖರಾದ ವೆಂಕಪ್ಪ ಪೂಜಾರಿ ಪಲ್ಲತ್ತಿಲ, ಹಮೀದ್ ಪಲ್ಕೆ, ಅಬ್ದುಲ್ ಅಝೀಝ್ ಸೂರಿಕುಮೇರು, ಸುಧಾಕರ ಶೆಟ್ಟಿ ಶಂಭುಗ, ಹನೀಫ್ ಸೂರಿಕುಮೇರು, ಹಸನ್ ಸೂರಿಕುಮೇರು, ರಾಮಚಂದ್ರ ಶೆಟ್ಟಿ ನೆಲ್ಲಿ ಮೊದಲಾದವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಸೂರಿಕುಮೇರು : ದ್ವಿತೀಯ ಹಂತದ ಉಚಿತ ಆಯುಷ್ಮಾನ್ ನೋಂದಣಿ ಹಾಗೂ ಕಾರ್ಡ್ ವಿತರಣೆ Rating: 5 Reviewed By: karavali Times
Scroll to Top