ವಿಶ್ವಕರ್ಮರ ಕೆಲಸದಿಂದ ಲೋಕ ಸೃಷ್ಟಿ : ರಾಧಾಕೃಷ್ಣ - Karavali Times ವಿಶ್ವಕರ್ಮರ ಕೆಲಸದಿಂದ ಲೋಕ ಸೃಷ್ಟಿ : ರಾಧಾಕೃಷ್ಣ - Karavali Times

728x90

16 September 2020

ವಿಶ್ವಕರ್ಮರ ಕೆಲಸದಿಂದ ಲೋಕ ಸೃಷ್ಟಿ : ರಾಧಾಕೃಷ್ಣ




ಬಂಟ್ವಾಳ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ 


ಬಂಟ್ವಾಳ, ಸೆ. 17, 2020 (ಕರಾವಳಿ ಟೈಮ್ಸ್) : ವಿಶ್ವಕರ್ಮ ಶಿಲ್ಪ ಕಲೆಗಳ ದೇವರು. ನಮ್ಮ ಪುರಾಣಗಳಲ್ಲಿ ಬರುವ ಪ್ರಸಿದ್ಧ ನಗರಗಳ ನಿರ್ಮಾತೃ. ಲೋಕದ ಸೃಷ್ಟಿ ವಿಶ್ವಕರ್ಮರ ಕೆಲಸದಿಂದ ಆಯಿತು ಎಂಬ ಮಾತಿದೆ. ಆ ಕಾರಣಕ್ಕಾಗಿ ಇವರನ್ನು ಕ್ರಿಯಾಶೀಲ ಚಟುವಟಿಕೆಗಳ ಮೂಲ ಎನ್ನುತ್ತಾರೆ ಎಂದು ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನಿಯ ಶಿರಸ್ತೇದಾರ್ ರಾಧಾಕೃಷ್ಣ ಹೇಳಿದರು. 

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಗುರುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಈ ಸಂದರ್ಭ ತಾಲೂಕು ಕಚೇರಿ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಸ್ವಾಗತಿಸಿ, ವಂದಿಸಿದರು.









  • Blogger Comments
  • Facebook Comments

0 comments:

Post a Comment

Item Reviewed: ವಿಶ್ವಕರ್ಮರ ಕೆಲಸದಿಂದ ಲೋಕ ಸೃಷ್ಟಿ : ರಾಧಾಕೃಷ್ಣ Rating: 5 Reviewed By: karavali Times
Scroll to Top