ಕನ್ಯಾನ : ಪ್ರಾಕೃತಿಕ ವಿಕೋಪದಿಂದ ಮೃತರಿಗೆ ಬಂಟ್ವಾಳ ಶಾಸಕರಿಂದ ಪರಿಹಾರ ಚೆಕ್ ವಿತರಣೆ - Karavali Times ಕನ್ಯಾನ : ಪ್ರಾಕೃತಿಕ ವಿಕೋಪದಿಂದ ಮೃತರಿಗೆ ಬಂಟ್ವಾಳ ಶಾಸಕರಿಂದ ಪರಿಹಾರ ಚೆಕ್ ವಿತರಣೆ - Karavali Times

728x90

1 September 2020

ಕನ್ಯಾನ : ಪ್ರಾಕೃತಿಕ ವಿಕೋಪದಿಂದ ಮೃತರಿಗೆ ಬಂಟ್ವಾಳ ಶಾಸಕರಿಂದ ಪರಿಹಾರ ಚೆಕ್ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಪ್ರಾಕೃತಿಕ ವಿಕೋಪದಿಂದಾಗಿ ಇತ್ತೀಚೆಗೆ ಮೃತಪಟ್ಟ ತಾಲೂಕಿನ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಸತೀಶ್ ಪೂಜಾರಿ ಮನೆಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಬೇಟಿ ನೀಡಿ ಸರಕಾರದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಚೆಕ್ ವಿತರಿಸಿದರು. 

ಮೃತರ ತಂದೆ ಬಾಬು ಪೂಜಾರಿ ಶಾಸಕರಿಂದ ಪರಿಹಾರ ಚೆಕ್ ಸ್ವೀಕರಿಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ವಿಟ್ಲ ಪಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ರವೀಶ್ ಶೆಟ್ಟಿ, ಕನ್ಯಾನ ಗ್ರಾ.ಪಂ. ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರಮುಖರಾದ ಲೋಹಿತ್ ಕೊಳ್ನಾಡು, ಮೋಹನದಾಸ ಶೆಟ್ಟಿ, ಚಂದ್ರಶೇಖರ ಪೂಜಾರಿ, ಗ್ರಾಮ ಸಹಾಯಕ ಪರಮೇಶ್ವರ್ ಮೊದಲಾದವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಕನ್ಯಾನ : ಪ್ರಾಕೃತಿಕ ವಿಕೋಪದಿಂದ ಮೃತರಿಗೆ ಬಂಟ್ವಾಳ ಶಾಸಕರಿಂದ ಪರಿಹಾರ ಚೆಕ್ ವಿತರಣೆ Rating: 5 Reviewed By: karavali Times
Scroll to Top