ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ : ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಕಾಸರಗೋಡು ಮೂಲದ ಆರೋಪಿಗಳು ಅಂದರ್ - Karavali Times ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ : ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಕಾಸರಗೋಡು ಮೂಲದ ಆರೋಪಿಗಳು ಅಂದರ್ - Karavali Times

728x90

4 September 2020

ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ : ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಕಾಸರಗೋಡು ಮೂಲದ ಆರೋಪಿಗಳು ಅಂದರ್




ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಗುರುವಾರ ಸಂಜೆ ಮಾರುತಿ ಓಮ್ನಿ ಕಾರಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಪಾಲಾರ್ ಬಂದಡ್ಕ ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಹಾಗೂ ಚಂದ್ರನ್ ಟಿ (34) ಎಂಬವರನ್ನು ಬಂಧಿಸಿದ್ದಾರೆ. 

ಗುರುವಾರ ಸಂಜೆ ಸುಮಾರು 6:45 ರ ವೇಳೆಗೆ ಪುರುಷರಕಟ್ಟೆಯಲ್ಲಿ ಕೆ ಎಲ್ 14 ಎಸ್ 7819 ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರನ್ನು ಪುತ್ತೂರು ನಗರ ಪೊಲೀಸರು ತಡೆದು ಪರಿಶೀಲಿಸಿದಾಗ ಹಿಂಸಾತ್ಮಕವಾಗಿ ನಡೆಸುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಗಳ ಸಹಿತ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ. ಈ ಬಗ್ಗೆ  ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಕಲಂ: 8, 11 ಗೋಹತ್ಯೆ ನಿಷೇಧ ಕಾಯಿದೆ 1964 ಮತ್ತು ಕಲಂ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 ಮತ್ತು ಕಲಂ : 66 ಜೊತೆಗೆ 192(ಎ) ಐ.ಎಂ.ವಿ ಆಕ್ಟ್  ಪ್ರಕರಣ ದಾಖಲಾಗಿದೆ. 








  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ನಗರ ಪೊಲೀಸರ ಕಾರ್ಯಾಚರಣೆ : ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಕಾಸರಗೋಡು ಮೂಲದ ಆರೋಪಿಗಳು ಅಂದರ್ Rating: 5 Reviewed By: karavali Times
Scroll to Top