ನಾಳೆ (ಅ. 31) ಬಂಟ್ವಾಳದಲ್ಲಿ ಇಂದಿರಾ ಪುಣ್ಯ ಸ್ಮರಣೆ ಪ್ರಯುಕ್ತ ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳ ಸಮಾವೇಶ - Karavali Times ನಾಳೆ (ಅ. 31) ಬಂಟ್ವಾಳದಲ್ಲಿ ಇಂದಿರಾ ಪುಣ್ಯ ಸ್ಮರಣೆ ಪ್ರಯುಕ್ತ ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳ ಸಮಾವೇಶ - Karavali Times

728x90

29 October 2020

ನಾಳೆ (ಅ. 31) ಬಂಟ್ವಾಳದಲ್ಲಿ ಇಂದಿರಾ ಪುಣ್ಯ ಸ್ಮರಣೆ ಪ್ರಯುಕ್ತ ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳ ಸಮಾವೇಶ

 


ಬಂಟ್ವಾಳ, ಅ. 30, 2020 (ಕರಾವಳಿ ಟೈಮ್ಸ್) : ದೇಶದ ಮಾಜಿ ಪ್ರದಾನಿ, ಉಕ್ಕಿನ ಮಹಿಳೆ ದಿವಂಗತ ಇಂದಿರಾ ಗಾಂಧೀಜಿ ಅವರ ಪುಣ್ಯಸ್ಮರಣೆಯ ಪ್ರಯುಕ್ತ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್  ಸಮಿತಿಗಳ ಜಂಟಿ ಆಶ್ರಯದಲ್ಲಿ ಭೂಸುಧಾರಣಾ ಕಾನೂನಿನ ಫಲಾನುಭವಿಗಳ “ಮಾಜಿ ಗೇಣಿದಾರರ ಸಮಾವೇಶ” ಅ. 31 ರಂದು ಶನಿವಾರ (ನಾಳೆ) ಬೆಳಿಗ್ಗೆ 11:30ಕ್ಕೆ  ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಲಿದೆ. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಇದರ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಅವರು ಮುಖ್ಯ ಭಾಷಣಗಾರರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ “ಉಳುವವನೇ ಭೂಮಿಯ ಒಡೆಯ” ಕಾನೂನಿನ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಸಸ್ವಿ ಗೊಳಿಸುವಂತೆ ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ನಾಳೆ (ಅ. 31) ಬಂಟ್ವಾಳದಲ್ಲಿ ಇಂದಿರಾ ಪುಣ್ಯ ಸ್ಮರಣೆ ಪ್ರಯುಕ್ತ ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳ ಸಮಾವೇಶ Rating: 5 Reviewed By: karavali Times
Scroll to Top