ಡಿಸಿಎಂ ಹುದ್ದೆಗೆ ಹವಣಿಸುತ್ತಿದ್ದ ಶ್ರೀರಾಮುಲುಗೆ ಹಿನ್ನಡೆ : ಆರೋಗ್ಯ ಖಾತೆಗೆ ಖೊಕ್ - Karavali Times ಡಿಸಿಎಂ ಹುದ್ದೆಗೆ ಹವಣಿಸುತ್ತಿದ್ದ ಶ್ರೀರಾಮುಲುಗೆ ಹಿನ್ನಡೆ : ಆರೋಗ್ಯ ಖಾತೆಗೆ ಖೊಕ್ - Karavali Times

728x90

12 October 2020

ಡಿಸಿಎಂ ಹುದ್ದೆಗೆ ಹವಣಿಸುತ್ತಿದ್ದ ಶ್ರೀರಾಮುಲುಗೆ ಹಿನ್ನಡೆ : ಆರೋಗ್ಯ ಖಾತೆಗೆ ಖೊಕ್



ಬೆಂಗಳೂರು, ಅ. 12, 2020 (ಕರಾವಳಿ ಟೈಮ್ಸ್) : ಉಪಚುನಾವಣೆ, ಸಚಿವ ಸಂಪುಟ ವಿಸ್ತರಣೆ, ಪುನಾರಚಣೆಗಳ ಮಧ್ಯೆ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ಪ್ರಮುಖ ಇಬ್ಬರು ಸಚಿವರುಗಳ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ. ಸಿಎಂ ಆದೇಶಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಸಹಿಯನ್ನೂ  ಹಾಕಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರು ಸಹಿತ ವಿವಿಧ ಕಡೆಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಖಾತೆಯ ಹೆಚ್ಚುವರಿ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರ ಹೆಗಲಿಗೆ ನೀಡಲಾಗಿದೆ. ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ವಹಿಸಲಾಗಿದೆ. ಅವರ ಬಳಿಯಿದ್ದ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯನ್ನು ಸ್ವತಃ ಸಿಎಂ ವಹಿಸಿಕೊಂಡಿದ್ದಾರೆ. ಈ ಮೂಲಕ ಡಿಸಿಎಂ ಕನಸು ಕಾಣುತ್ತಿದ್ದ ಶ್ರೀರಾಮುಲುಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ. 

ಇದರ ಜೊತೆಗೆ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಖಾತೆ ಹೊತ್ತಿದ್ದ ಗೋವಿಂದ ಎಂ ಕಾರಜೋಳ ಅವರಿಗೆ ಲೋಕೋಪಯೋಗಿ ಖಾತೆಯನ್ನು ಮಾತ್ರ ಉಳಿಸಲಾಗಿದೆ. ಖಾತೆಗೆಳ ಈ ಮರು ಹಂಚಿಕೆ ಬಳಿಕ ಇದೀಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಳಿ ಡಿಪಿಎಆರ್, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗೃಹ ಇಲಾಖೆಯ ಗುಪ್ತಚರ ವಿಭಾಗ, ಯೋಜನೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಸಣ್ಣ ಪ್ರಮಾಣ ಕೈಗಾರಿಕೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಇತರ ಎಲ್ಲಾ ಹಂಚಿಕೆ ಮಾಡದಿರುವ ಖಾತೆಗಳಿವೆ.








  • Blogger Comments
  • Facebook Comments

0 comments:

Post a Comment

Item Reviewed: ಡಿಸಿಎಂ ಹುದ್ದೆಗೆ ಹವಣಿಸುತ್ತಿದ್ದ ಶ್ರೀರಾಮುಲುಗೆ ಹಿನ್ನಡೆ : ಆರೋಗ್ಯ ಖಾತೆಗೆ ಖೊಕ್ Rating: 5 Reviewed By: karavali Times
Scroll to Top