ಉಪ್ಪಿನಂಗಡಿ, ನ. 30, 2020 (ಕರಾವಳಿ ಟೈಮ್ಸ್) : ನೆಲ್ಯಾಡಿ ಸಾಗರ್ ಹೋಟೆಲ್ ಮಾಲಕ ಹಾಗೂ ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಯು ಕೆ ಹಂಝ ಸಾಗರ್ (69) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಮೂಲತಃ ಉಪ್ಪಿನಂಗಡಿ ಕೆಂಪಿ ಮಜಲು ನಿವಾಸಿಯಾಗಿರುವ ಇವರು ಕಳೆದ ಸುಮಾರು 35 ವರ್ಷಗಳಿಂದ ನೆಲ್ಯಾಡಿಯಲ್ಲಿ ನೆಲೆಸಿದ್ದು, ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇವರು ಹಲವಾರು ಸಾಮಾಜಿಕ, ರಾಜಕೀಯ ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರ, ಆರು ಮಂದಿ ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment