ಹೆಜಮಾಡಿ : ಈಜಾಟಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲು - Karavali Times ಹೆಜಮಾಡಿ : ಈಜಾಟಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲು - Karavali Times

728x90

5 November 2020

ಹೆಜಮಾಡಿ : ಈಜಾಟಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

 


ಉಡುಪಿ, ನ. 06, 2020 (ಕರಾವಳಿ ಟೈಮ್ಸ್) : ಜಿಲ್ಲೆಯ ಪಡುಬಿದ್ರಿ ಸಮೀಪದ ಹೆಜಮಾಡಿಯಲ್ಲಿ ಗುರುವಾರ ನದಿಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹೆಜಮಾಡಿ ಎನ್.ಎಸ್. ರಸ್ತೆಯ ನಿವಾಸಿಗಳಾದ ಮುಹ್ಸಿನ್ (16) ಹಾಗೂ ಮುಹಮ್ಮದ್ ರಾಯಿಸ್ (16) ನೀರು ಪಾಲಾದ ಬಾಲಕರು. ಹೆಜಮಾಡಿಯ ಕಾಮಿನಿ ನದಿಗೆ ಮೂವರು ಯುವಕರು ಗುರುವಾರ ಈಜಾಟಕ್ಕೆ ತೆರಳಿದ್ದ ವೇಳೆ ಈ ದುರಂತ ಘಟನೆ ಸಂಭವಿಸಿದೆ. 

ನೀರಿನ ಸೆಳೆತಕ್ಕೆ ಸಿಲುಕಿ ಮೂವರು ನೀರಿನಲ್ಲಿ ಮುಳುಗಿದ್ದಾರೆ.  ಈ ವೇಳೆ  ಸ್ಥಳೀಯರು ತಕ್ಷಣ ಮೂವರನ್ನೂ ನೀರಿನಿಂದ ಮೇಲಕ್ಕೆತ್ತಿದ್ದಾರಾದರೂ ಅದಾಗಲೇ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಮುಹಮ್ಮದ್ ನಬೀಲ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.








  • Blogger Comments
  • Facebook Comments

0 comments:

Post a Comment

Item Reviewed: ಹೆಜಮಾಡಿ : ಈಜಾಟಕ್ಕೆ ತೆರಳಿದ್ದ ಇಬ್ಬರು ಬಾಲಕರು ನೀರುಪಾಲು Rating: 5 Reviewed By: karavali Times
Scroll to Top