ಉಳ್ಳಾಲ ಸಮುದ್ರದಲ್ಲಿ ದೋಣಿ ದುರಂತ : ನಾಪತ್ತೆಯಾದವರ ಪೈಕಿ ಇಬ್ಬರ ಮೃತದೇಹ ಪತ್ತೆ - Karavali Times ಉಳ್ಳಾಲ ಸಮುದ್ರದಲ್ಲಿ ದೋಣಿ ದುರಂತ : ನಾಪತ್ತೆಯಾದವರ ಪೈಕಿ ಇಬ್ಬರ ಮೃತದೇಹ ಪತ್ತೆ - Karavali Times

728x90

1 December 2020

ಉಳ್ಳಾಲ ಸಮುದ್ರದಲ್ಲಿ ದೋಣಿ ದುರಂತ : ನಾಪತ್ತೆಯಾದವರ ಪೈಕಿ ಇಬ್ಬರ ಮೃತದೇಹ ಪತ್ತೆ



ಮಂಗಳೂರು, ಡಿ. 01, 2020 (ಕರಾವಳಿ ಟೈಮ್ಸ್) : ಉಳ್ಳಾಲ ಅರಬ್ಬೀ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದೆ. ಪಾಂಡುರಂಗ ಸುವರ್ಣ (58) ಹಾಗೂ ಚಿಂತನ್ (21) ಎಂಬವರ ಮೃತದೇಹಗಳು ಪತ್ತೆಯಾಗಿದೆ. 

ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ದೋಣಿ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಶೋಧ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ. 

ದೋಣಿ ಮುಳುಗುವಾಗ ಅದರಲ್ಲಿ 22 ಮಂದಿ ಮೀನುಗಾರರಿದ್ದರು. ಆರು ಮಂದಿ ನಾಪತ್ತೆಯಾಗಿದ್ದರು. ಉಳಿದವರ ರಕ್ಷಣೆ ಮಾಡಲಾಗಿತ್ತು. ನಾಪತ್ತೆಯಾಗಿರುವ ಪ್ರೀತಂ, ಝಿಯಾವುಲ್ಲಾ, ಅನ್ಸಾರ್ ಹಾಗೂ ಹಸೈನಾರ್ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.









  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲ ಸಮುದ್ರದಲ್ಲಿ ದೋಣಿ ದುರಂತ : ನಾಪತ್ತೆಯಾದವರ ಪೈಕಿ ಇಬ್ಬರ ಮೃತದೇಹ ಪತ್ತೆ Rating: 5 Reviewed By: karavali Times
Scroll to Top