ಗುಜರಾತ್ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿದು 15 ಕಾರ್ಮಿಕರ ದಾರುಣ ಸಾವು : ಪ್ರಧಾನಿ ಮೋದಿ ಸಂತಾಪ - Karavali Times ಗುಜರಾತ್ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿದು 15 ಕಾರ್ಮಿಕರ ದಾರುಣ ಸಾವು : ಪ್ರಧಾನಿ ಮೋದಿ ಸಂತಾಪ - Karavali Times

728x90

18 January 2021

ಗುಜರಾತ್ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿದು 15 ಕಾರ್ಮಿಕರ ದಾರುಣ ಸಾವು : ಪ್ರಧಾನಿ ಮೋದಿ ಸಂತಾಪ

ಸೂರತ್, ಜ. 19, 2021 (ಕರಾವಳಿ ಟೈಮ್ಸ್) : ಗುಜರಾತ್ ರಾಜ್ಯದ ಸೂರತ್ ನಗರದ ಕೊಸಂಬಾ ಎಂಬಲ್ಲಿ ಮಂಗಳವಾರ (ಜ 19) ಮುಂಜಾನೆ ಬೃಹತ್ ಟ್ರಕ್‍ವೊಂದು ಚಾಲಕನ ನಿಯಂತ್ರಣ ಮೀರಿ ಹೆದ್ದಾರಿ ಬಿಟ್ಟು ಪಾದಚಾರಿ ಮಾರ್ಗಕ್ಕೆ ನುಗ್ಗಿದ ಪರಿಣಾಮ ಫುಟ್ ಪಾತ್‍ನಲ್ಲಿ ಮಲಗಿದ್ದ ಸುಮಾರು 15 ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟವರೆಲ್ಲರೂ ರಾಜಸ್ಥಾನ ಮೂಲದ ಕಾರ್ಮಿಕರು ಎನ್ನಲಾಗುತ್ತಿದೆ. ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸೂರತ್ ಟ್ರಕ್ ಅಪಘಾತದಲ್ಲಿ ಹಲವು ಜನರು ಸಾವನ್ನಪ್ಪಿರುವುದು ದುರಂತ. ಮೃತರ ಕುಟುಂಬಸ್ಥರ ಕುರಿತು ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಗುಜರಾತ್ ಪಾದಚಾರಿ ಮಾರ್ಗದ ಮೇಲೆ ಟ್ರಕ್ ಹರಿದು 15 ಕಾರ್ಮಿಕರ ದಾರುಣ ಸಾವು : ಪ್ರಧಾನಿ ಮೋದಿ ಸಂತಾಪ Rating: 5 Reviewed By: karavali Times
Scroll to Top