ಉಮ್ಮರ್ ಫಜೀರ್ ನಿಧನ : ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ - Karavali Times ಉಮ್ಮರ್ ಫಜೀರ್ ನಿಧನ : ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ - Karavali Times

728x90

21 January 2021

ಉಮ್ಮರ್ ಫಜೀರ್ ನಿಧನ : ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ

ಮಂಗಳೂರು, ಜ. 22, 2021 (ಕರಾವಳಿ ಟೈಮ್ಸ್) : ಬಂಟ್ವಾಳ ತಾ.ಪಂ ಮಾಜಿ ಉಪಾಧ್ಯಕ್ಷ, ಬಂಟ್ವಾಳ ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಹಾಲಿ ಕಾರ್ಯದರ್ಶಿ, ಫಜೀರು ನಿವಾಸಿ ಉಮ್ಮರ್ ಫಜೀರ್ (60) ಹಠಾತ್ ಹೃದಯಾಘಾತಕ್ಕೊಳಗಾಗಿ ಶುಕ್ರವಾರ ಮುಂಜಾನೆ ನಿಧನರಾಗಿದ್ದು, ಅವರ ನಿಧನಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಬಗ್ಗೆ ಸಂತಾಪ ಸೂಚಕ ಹೇಳಿಕೆ ನೀಡಿರುವ ಪರಿಷತ್ ಅಧ್ಯಕ್ಷ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು, ಅಖಿಲ ಭಾರತ ಬ್ಯಾರಿ ಪರಿಷತ್ ಸಕ್ರಿಯ ಸದಸ್ಯರಾಗಿರುವ ಉಮ್ಮರ್ ಫಜೀರು ಅವರು ರಾಜಕೀಯ ರಹಿತವಾಗಿಯೂ ಹಲವು ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಮಾಜಿಕ , ಸಾಮುದಾಯಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹಠಾತ್ ಅಗಲಿಕೆ ಸಮಾಜಕ್ಕೆ, ಬ್ಯಾರಿ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಬರ್ಝಖೀ ಜೀವನದ ಸಾಫಲ್ಯತೆಗೆ ಪ್ರಾರ್ಥಿಸಲು ಕರೆ ನೀಡಿದ್ದಾರೆ. ಹಾಗೂ ಭಗವಂತ ಫಜೀರು ಅವರ ಹಠಾತ್ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಹಾರೈಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಉಮ್ಮರ್ ಫಜೀರ್ ನಿಧನ : ಅಖಿಲ ಭಾರತ ಬ್ಯಾರಿ ಪರಿಷತ್ ಸಂತಾಪ Rating: 5 Reviewed By: karavali Times
Scroll to Top