ಬಾಳ್ತಿಲ : ಮನೆಯಲ್ಲಿ ಬೈದುದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು - Karavali Times ಬಾಳ್ತಿಲ : ಮನೆಯಲ್ಲಿ ಬೈದುದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು - Karavali Times

728x90

8 February 2021

ಬಾಳ್ತಿಲ : ಮನೆಯಲ್ಲಿ ಬೈದುದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು

ಬಂಟ್ವಾಳ, ಫೆ. 09, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಾಳ್ತಿಲ ಗ್ರಾಮದ ಚೆರ್ಕಳ ನಿವಾಸಿ, ಶಂಭೂರು ಪ್ರೌಢಶಾಲಾ 9ನೇ ವಿದ್ಯಾರ್ಥಿ ಹರ್ಷಿತ್ (14) ಮನೆಯಲ್ಲಿ ಹೆತ್ತವರು ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಾತ್ರೆಯಿಂದ ಬರುವಾಗ ತಡವಾಗಿದ್ದಲ್ಲದೆ, ತಂಗಿಗೆ ಐಸ್ ಕ್ರೀಂ ಕೂಡಾ ತಂದಿಲ್ಲ ಎಂಬುದಕ್ಕೆ ಮನೆಯಲ್ಲಿ ಹೆತ್ತವರು ಜೋರು ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಬಾಳ್ತಿಲ : ಮನೆಯಲ್ಲಿ ಬೈದುದಕ್ಕೆ ವಿದ್ಯಾರ್ಥಿ ನೇಣಿಗೆ ಶರಣು Rating: 5 Reviewed By: karavali Times
Scroll to Top