ಹೆದ್ದಾರಿ ಯೋಜನೆ ಪ್ರಾಧಿಕಾರ ಯೋಜನೆಗಳ ಸದಸ್ಯರ ಭೇಟಿ ಮಾಡಿದ ಸಂಸದ ನಳಿನ್ : ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ - Karavali Times ಹೆದ್ದಾರಿ ಯೋಜನೆ ಪ್ರಾಧಿಕಾರ ಯೋಜನೆಗಳ ಸದಸ್ಯರ ಭೇಟಿ ಮಾಡಿದ ಸಂಸದ ನಳಿನ್ : ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ - Karavali Times

728x90

23 March 2021

ಹೆದ್ದಾರಿ ಯೋಜನೆ ಪ್ರಾಧಿಕಾರ ಯೋಜನೆಗಳ ಸದಸ್ಯರ ಭೇಟಿ ಮಾಡಿದ ಸಂಸದ ನಳಿನ್ : ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ


ನವದೆಹಲಿ, ಮಾ. 23, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಸಂಸದ ಹಾಗೂ ಕರ್ನಾಟಕ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳ ಸದಸ್ಯ ಆರ್.ಕೆ. ಪಾಂಡೆ ಅವರನ್ನು ನವದೆಹಲಿ ಕಚೇರಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. 

ಈಗಾಗಲೇ ಭಾರತ್ ಮಾಲಾ ಯೋಜನೆಯಡಿ ಮಂಜೂರಾದ ಮುಲ್ಕಿ-ಕಿನ್ನಿಗೋಳಿ-ಮೂರು ಕಾವೇರಿ-ಕಟೀಲು-ಪೆÇಳಲಿ-ಬಿಸಿ.ರೋಡ್-ಮೆಲ್ಕಾರ್-ತೊಕ್ಕೋಟು ರಸ್ತೆಯ ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಫಂದಿಸಿದ ಎನ್.ಎಚ್.ಎ.ಐ (ಯೋಜನೆಗಳು) ಸದಸ್ಯ ಆರ್.ಕೆ. ಪಾಂಡೆ ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದಲ್ಲದೆ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಸಾಣೂರುನಿಂದ ಬಿಕರ್ನಕಟ್ಟೆವರೆಗಿನ ಚತುಷ್ಟ್ಪತ ಕಾಮಗಾರಿಗೆ ಅಡ್ಡಿಯಾಗಿರುವ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಅತೀ ಶೀಘ್ರದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶಿರಾಡಿ ಘಾಟ್ ಸುರಂಗ ಮಾರ್ಗದ ಕಾಮಗಾರಿಗೆ ಡಿ.ಪಿ.ಆರ್ ಮಾಡಲು ಸೂಕ್ರ ಕ್ರಮ ಕೈಗೊಳ್ಳಲಾಗುವುದು, ರಾಷ್ಟ್ರೀಯ ಹೆದ್ದಾರಿ 275ರ ಮಾಣಿಯಿಂದ ಕುಶಾಲನಗರವರೆಗಿನ 126.00 ಕಿ.ಮೀ ದ್ವಿಪಥ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಕಾರ್ಯವು ಪ್ರಗತಿಯಲ್ಲಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗಿನ ಚತುಷ್ಪಥ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕೆ.ಎನ್.ಆರ್ ಕನ್ಸ್ಡ್ರಕ್ಷನ್ ಸಂಸ್ಥೆಗೆ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ಹೆದ್ದಾರಿ ಯೋಜನೆ ಪ್ರಾಧಿಕಾರ ಯೋಜನೆಗಳ ಸದಸ್ಯರ ಭೇಟಿ ಮಾಡಿದ ಸಂಸದ ನಳಿನ್ : ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಚರ್ಚೆ Rating: 5 Reviewed By: karavali Times
Scroll to Top