ಗುಂಡು ಹಾರಿಸಿ ದಾಂಧಲೆ ನಡೆಸಿದ ಡಿ ಗ್ಯಾಂಗಿನ ಮತ್ತೆ 4 ಮಂದಿ ನಟೋರಿಯಸ್ ಗಳನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸ್ - Karavali Times ಗುಂಡು ಹಾರಿಸಿ ದಾಂಧಲೆ ನಡೆಸಿದ ಡಿ ಗ್ಯಾಂಗಿನ ಮತ್ತೆ 4 ಮಂದಿ ನಟೋರಿಯಸ್ ಗಳನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸ್ - Karavali Times

728x90

5 April 2021

ಗುಂಡು ಹಾರಿಸಿ ದಾಂಧಲೆ ನಡೆಸಿದ ಡಿ ಗ್ಯಾಂಗಿನ ಮತ್ತೆ 4 ಮಂದಿ ನಟೋರಿಯಸ್ ಗಳನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸ್


ಬಂಟ್ವಾಳ, ಎಪ್ರಿಲ್ 05, 2021 (ಕರಾವಳಿ ಟೈಮ್ಸ್) : ಕೇರಳದಲ್ಲಿ ಪಿಸ್ತೂಲ್ ಜೊತೆಗಿಟ್ಟುಕೊಂಡು ದಾಂಧಲೆ ನಡೆಸಿದ ಯುವಕರ ಗುಂಪು ಬಳಿಕ ವಿಟ್ಲದಲ್ಲೂ ರಾದ್ದಾಂತ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಸೋಮವಾರ ಮತ್ತೆ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ರೆಹಮಾನ್ ಮೀಯಾಪದವು, ರಾಕೇಶ್ ಜಲಾಗಾವ್, ಮಹಾರಾಷ್ಟ್ರ, ಕೂವಾ ಫಯಾಜ್ ಹಾಗೂ ಹೈದರ್ ಆಲಿ ಅಲಿಯಾಸ್ ಹೈದರ್ ಮಂಗಲ್ಪಾಡಿ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 7ಕ್ಕೇರಿದಂತಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಫಾಕ್ ಮಿಯಾಪದವು, ಶಾಕಿರ್ ಮಿಯಾಪದವು ಹಾಗೂ ಲತೀಫ್ ಮಿಯಾಪದವು ಎಂಬವರನ್ನು ಪೊಲೀಸರು ಬಂಧಿಸಿದ್ದರು. 

ಕೇರಳ ರಾಜ್ಯದ ಕಾಸರಗೋಡು, ಪೈವಳಿಕೆ ಹಾಗೂ ಮೀಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ಎಂದು ಗುರುತಿಸಿಕೊಂಡಿದ್ದ ಯುವಕರ ಗುಂಪೆÇಂದು ತಮ್ಮ ಬಳಿ ಪಿಸ್ತೂಲ್‍ಗಳನ್ನು ಇಟ್ಟುಕೊಂಡು ಸಂಚರಿಸುತ್ತಿದ್ದರು.  ಮಾರ್ಚ್ 9 ರಂದು ಯುವಕರು ಪಿಸ್ತೂಲನ್ನು ಪ್ರದರ್ಶಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಈ ಬಗ್ಗೆ ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಇದೇ ಯುವಕರ ತಂಡ ಮಾರ್ಚ್ 25 ರಂದು ರಾತ್ರಿ ಮಂಜೇಶ್ವರ ಸಮೀಪದ ಉಪ್ಪಳದ ಬಾರ್‍ವೊಂದರಲ್ಲಿ ದಾಂಧಲೆ ನಡೆಸಿ ಗುಂಡು ಹಾರಿಸಿ ಪರಾರಿಯಾಗಿದ್ದಲ್ಲದೆ ಅಲ್ಲಿಂದ ಮೀಯಪದವು ಎಂಬಲ್ಲಿ ಪೆÇಲೀಸರು  ಕಾರ್ಯಾಚರಣೆ ನಡೆಸುವಾಗ ಪೆÇಲೀಸರ ಮೇಲೆ ಗುಂಡು ಹಾರಾಟ ನಡೆಸಿ ವಿಟ್ಲ ಕಡೆ ಪರಾರಿಯಾಗಿ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ವಿಟ್ಲ ಠಾಣಾ ಪೆÇಲೀಸರು ತಮ್ಮ ವ್ಯಾಪ್ತಿಯ ಕೇರಳ ಗಡಿಪ್ರದೇಶದ ಕೊಡಂಗೆ ಎಂಬಲ್ಲಿ ಚೆಕ್‍ಪೆÇೀಸ್ಟ್ ತೆರೆದು ತಪಾಸಣೆ ನಡೆಸುತ್ತಿದ್ದಾಗ ಮರುದಿನ ಮುಂಜಾನೆ 4 ಗಂಟೆಯ ವೇಳೆಗೆ ಚೆಕ್‍ಪೆÇೀಸ್ಟ್ ಬಳಿ ಒಂದು ಕಾರು ಬಂದು ಒಂದು ಸುತ್ತು ಗುಂಡು ಹಾರಿಸಿ ನಂತರ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ನಿಂತಿದ್ದು, ಕಾರಿನಲ್ಲಿದ್ದ ದುಷ್ಕರ್ಮಿಗಳು ಕಾರಿನಿಂದ ಇಳಿದು ಓಡುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿಗಳ ಪೈಕಿ 3 ಮಂದಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದರು. ಬಂಧಿತರಿಂದ ಪೊಲೀಸರು ಒಂದು ಕಾರು, 1 ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗರ್ ವಶಪಡಿಸಿಕೊಂಡಿದ್ದರು. 

ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಕಲಂ 143, 147, 148, 353, 307 ಜೊತೆಗೆ 149 ಭಾರತೀಯ ದಂಡ ಸಂಹಿತೆ ಹಾಗೂ ಕಲಂ 3 ಜೊತೆಗೆ 25, 27 ಭಾರತೀಯ ಶಸ್ತ್ರ್ತಾಸ್ತ್ರ ಕಾಯ್ದೆ ಹಾಗೂ ಕಲಂ 8(ಎ), (ಸಿ) ಜೊತೆಗೆ  21 (ಬಿ), 22 (ಸಿ) ಎನ್.ಡಿ.ಪಿ.ಎಸ್. ಆಕ್ಟ್ 1985 ರಂತೆ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಮುಂದುವರಿಸಿದ್ದರು. 

        ಎಪ್ರಿಲ್ 5 ರಂದು ಬೆಳಿಗ್ಗೆ 5 ಗಂಟೆ ವೇಳೆಗೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ಬೆಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ವಿಟ್ಲ ಪೆÇಲೀಸರ ತಂಡ ಬುಡೊಳಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ 4 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಒಟ್ಟು ಘಟನೆಗೆ ಸಂಬಂಧಿಸಿದಂತೆ ಪೊಲೀಸರು 4 ಪಿಸ್ತೂಲುಗಳು ಹಾಗೂ 27 ರೌಂಡ್ಸ್ ಗಳು, 1 ಎಸ್.ಎಂ.ಬಿ.ಎಲ್. ಕೋವಿ, 1 ಕೊಡಲಿ, 1 ಡ್ರಾಗೆರ್, 2 ಹ್ಯಾಂಡ್ ಪಂಚ್, ಎಂಡಿಎಂಎ ಮಾದಕ ದ್ರವ್ಯ, ಎಲ್.ಎಸ್.ಡಿ. ಮಾದಕ ದ್ರವ್ಯ ಹಾಗೂ 2 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನೆವಾನೆ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್ಪಿ ವ್ಯಾಲೆಂಟೈನ್ ಡಿ’ಸೋಜ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ ಅವರ ನೇತೃತ್ವದಲ್ಲಿ ವಿಟ್ಲ ಪೆÇಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ಮತ್ತು  ಎಎಸ್ಸೈ ಕರುಣಾಕರ, ಸಿಬ್ಬಂದಿಗಳಾದ ಗಿರೀಶ್, ಪ್ರಸನ್ನ, ಪ್ರತಾಪ, ಲೊಕೇಶ್, ವಿನಾಯಕ, ನಝೀರ್, ವಿವೇಕ, ಹೇಮರಾಜ್, ಪ್ರವೀಣ ಅವರನ್ನೊಳಗೊಂಡ ಪೊಲೀಸ್ ತಂಡ ಈ ಕಾರ್ಯಾಚರಣೆ ಕೈಗೊಂಡಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಗುಂಡು ಹಾರಿಸಿ ದಾಂಧಲೆ ನಡೆಸಿದ ಡಿ ಗ್ಯಾಂಗಿನ ಮತ್ತೆ 4 ಮಂದಿ ನಟೋರಿಯಸ್ ಗಳನ್ನು ಹೆಡೆಮುರಿ ಕಟ್ಟಿದ ವಿಟ್ಲ ಪೊಲೀಸ್ Rating: 5 Reviewed By: karavali Times
Scroll to Top