ಮಂಗಳೂರು, ಜೂನ್ 26, 2021 (ಕರಾವಳಿ ಟೈಮ್ಸ್) : ಜೂನ್ 27 ಭಾನುವಾರದಿಂದ ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ. ಜೊತೆಗೆ ನದಿ ಪಾತ್ರದ ಹಾಗೂ ಕಡಲ ತೀರದ ಜನ ಎಚ್ಚರಿಕೆಯಿಂದ ಇರುವಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಮತ್ತೆ ಮಳೆ ಚುರುಕಾಗಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಕೆಲವೆಡೆ ಭಾರೀ ಗಾಳಿ ಮಳೆಯಾಗಿದೆ. ಶನಿವಾರ ಸಂಜೆ ವೇಳೆಗೆ ಮಂಗಳೂರು ನಗರದಲ್ಲಿ ಮೋಡ ಕವಿಡ ವಾತಾವರಣ ಇತ್ತು. ಬಂಟ್ವಾಳ ಹಾಗೂ ಸುಳ್ಯ ತಾಲೂಕುಗಳಲ್ಲೂ ಹೆಚ್ಚಿನ ಮಳೆಯಾಗಿದೆ.
ಶನಿವಾರ ವೀಕೆಂಡ್ ಕಫ್ರ್ಯೂ ಮೊದಲ ದಿನ ಆಗಿದ್ದು ಪೊಲೀಸರು ಬಿಗು ಕ್ರಮ ಕೈಗೊಂಡಿದ್ದ ಹಿನ್ನಲೆಯಲ್ಲಿ ಜನ ಹಾಗೂ ವಾಹನ ಸಂಚಾರ ವಿರಳ ಆಗಿದ್ದರಿಂದ ಯಾವುದೇ ಹೆಚ್ಚಿನ ಅಸ್ತವ್ಯಸ್ತತೆ ಕಂಡು ಬಂದಿಲ್ಲ. ಭಾನುವಾರದಿಂದ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ತಗ್ಗು ಪ್ರದೇಶ ಜನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
0 comments:
Post a Comment