ಇರಾ-ಸಂಪಿಲ ನಿವಾಸಿ ಅಬೂಬಕ್ಕರ್ ನಿಧನ - Karavali Times ಇರಾ-ಸಂಪಿಲ ನಿವಾಸಿ ಅಬೂಬಕ್ಕರ್ ನಿಧನ - Karavali Times

728x90

2 June 2021

ಇರಾ-ಸಂಪಿಲ ನಿವಾಸಿ ಅಬೂಬಕ್ಕರ್ ನಿಧನ

ಬಂಟ್ವಾಳ, ಜೂನ್ 03, 2021 (ಕರಾವಳಿ ಟೈಮ್ಸ್) : ತಾಲೂಕಿನ ಇರಾ ಗ್ರಾಮದ ಸಂಪಿಲ ನಿವಾಸಿ ಅಬೂಬಕ್ಕರ್ (64) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಬೆಳಿಗ್ಗೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾದರು.

ಮುಡಿಪು ಪೇಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದ ಅಬೂಬಕ್ಕರ್ ಕಾಂಗ್ರೆಸ್ ಪಕ್ಷದ ಸ್ಥಳೀಯ  ಹಿರಿಯ ಮುಖಂಡರಾಗಿ ಹುದ್ದೆಯನ್ನು ಬಯಸದೆ ಯಾವುದೇ  ಸಂಧಿಗ್ದ ಸಮಯದಲ್ಲೂ ಪಕ್ಷಕ್ಕೆ ಸಲಹೆಗಾರರಾಗಿದ್ದರು.

ಇವರ ನಿಧನಕ್ಕೆ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಂಗಳೂರು ತಾ ಪಂ ಅಧ್ಯಕ್ಣ ಮೊಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯೆ  ಮಮತಾ ಡಿ ಎಸ್ ಗಟ್ಟಿ, ಇರಾ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಅಬ್ದುಲ್ ರಹಿಮಾನ್ ಸಂಪಿಲ, ಪದ್ಮನಾಭ ನರಿಂಗಾನ,  ಅಬ್ದುಲ್ ಜಲೀಲ್ ಮೊಂಟುಗೋಳಿ, ಅಬ್ದುಲ್ ನಾಸೀರ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಇರಾ-ಸಂಪಿಲ ನಿವಾಸಿ ಅಬೂಬಕ್ಕರ್ ನಿಧನ Rating: 5 Reviewed By: lk
Scroll to Top