ಕಡೇಶ್ವಾಲ್ಯ : ಶ್ರೀಗಂಧ ಮರವನ್ನು ರಾತೋರಾತ್ರಿ ಬುಡ ಸಮೇತ ಕಡಿದು ಕೊಂಡು ಹೋದ ಕಳ್ಳರು - Karavali Times ಕಡೇಶ್ವಾಲ್ಯ : ಶ್ರೀಗಂಧ ಮರವನ್ನು ರಾತೋರಾತ್ರಿ ಬುಡ ಸಮೇತ ಕಡಿದು ಕೊಂಡು ಹೋದ ಕಳ್ಳರು - Karavali Times

728x90

27 July 2021

ಕಡೇಶ್ವಾಲ್ಯ : ಶ್ರೀಗಂಧ ಮರವನ್ನು ರಾತೋರಾತ್ರಿ ಬುಡ ಸಮೇತ ಕಡಿದು ಕೊಂಡು ಹೋದ ಕಳ್ಳರು

ಬಂಟ್ವಾಳ, ಜುಲೈ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಪೆರ್ಲಾಪು ನಿವಾಸಿ ತನಿಯಪ್ಪ ಶೆಟ್ಟಿ ಅವರ ಪುತ್ರ ಸದಾಶಿವ ಶೆಟ್ಟಿ ಅವರ ಜಮೀನಿನಲ್ಲಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳರು ರಾತೋರಾತ್ರಿ ಬುಡ ಸಮೇತ ಕಿತ್ತುಕೊಂಡು ಹೋಗಿರುವ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. 

 ಸದಾಶಿವ ಶೆಟ್ಟಿ ಅವರು ಸರ್ವೆ ನಂಬ್ರ 263/1ಎ7 ರಲ್ಲಿ 0-52 ಎಕ್ರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದು, ಈ ಪೈಕಿ ಕಳೆದ 15 ವರ್ಷಗಳಿಂದ ಒಂದು ಶ್ರೀಗಂಧದ ಮರವನ್ನು ನೆಟ್ಟು ಬೆಳೆಸಿದ್ದರು. ಸೋಮವಾರ ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಕಳ್ಳರು ಜಮೀನಿಗೆ ಪ್ರವೇಶಿಸಿ ಶ್ರೀಗಂಧದ ಮರವನ್ನು ಬುಡ ಸಮೇತ ಕಡಿದು ಪರಾರಿಯಾಗಿದ್ದಾರೆ. ಕಳವಾಗಿರುವ ಶ್ರೀಗಂಧದ ಮರದ ಮೌಲ್ಯ ಸುಮಾರು 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. 

 ಈ ಬಗ್ಗೆ ಸದಾಶಿವ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಡೇಶ್ವಾಲ್ಯ : ಶ್ರೀಗಂಧ ಮರವನ್ನು ರಾತೋರಾತ್ರಿ ಬುಡ ಸಮೇತ ಕಡಿದು ಕೊಂಡು ಹೋದ ಕಳ್ಳರು Rating: 5 Reviewed By: karavali Times
Scroll to Top