ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ ಅಮೀರ್ ಅಹ್ಮದ್ ತುಂಬೆ ನಿಧನ  - Karavali Times ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ ಅಮೀರ್ ಅಹ್ಮದ್ ತುಂಬೆ ನಿಧನ  - Karavali Times

728x90

22 July 2021

ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ ಅಮೀರ್ ಅಹ್ಮದ್ ತುಂಬೆ ನಿಧನ 

 ಬಂಟ್ವಾಳ, ಜುಲೈ 23, 2021 (ಕರಾವಳಿ ಟೈಮ್ಸ್) : ರಾಜ್ಯ ಇಂಟಕ್ ಉಪಾಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಂದಾಳು ಆಗಿ ಗುರುತಿಸಿಕೊಂಡಿದ್ದ, ಉದ್ಯಮಿ ಡಾ ಕೆ ಎಸ್ ಅಮೀರ್ ಅಹ್ಮದ್ ತುಂಬೆ (47) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮಧ್ಯ ರಾತ್ರಿ ವೇಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್ ಬಾಧಿತರಾಗಿದ್ದ ಅಮೀರ್ ಅವರನ್ನು ಇತರ ಕಾಯಿಲೆಗಳಿಗಾಗಿ ಇತ್ತೀಚೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಒಂದಷ್ಟು ಚೇತರಿಕೆ ಕಂಡಿದ್ದರೂ ಗುರುವಾರ ಮತ್ತೆ ಆರೋಗ್ಯ ಬಿಗಡಾಯಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಅಮೀರ್ ತಂದೆ, ಸಹೋದರರು, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ಇಂಟಕ್ ಉಪಾಧ್ಯಕ್ಷ ಡಾ ಅಮೀರ್ ಅಹ್ಮದ್ ತುಂಬೆ ನಿಧನ  Rating: 5 Reviewed By: karavali Times
Scroll to Top