ಬಂಟ್ವಾಳ, ಜುಲೈ 16, 2021 (ಕರಾವಳಿ ಟೈಮ್ಸ್) : ಮಂಗಳೂರು ಶಾಸಕ ಯು ಟಿ ಖಾದರ್ ಅವರು ತನ್ನ ಚಾಲನಾ ಪರವಾನಿಗೆ ನವೀಕರಣ ಹಿನ್ನಲೆಯಲ್ಲಿ ಶುಕ್ರವಾರ ಮೆಲ್ಕಾರಿನಲ್ಲಿರುವ ಬಂಟ್ವಾಳ ಎ ಆರ್ ಟಿ ಒ ಕಚೇರಿಗೆ ಭೇಟಿ ನೀಡಿದರು.
ಈ ವೇಳೆ ಕಚೇರಿಯ ಕುಂದುಕೊರತೆಗಳ ಬಗ್ಗೆ ಸಾರಿಗೆ ಸಹಾಯಕ ಅಧಿಕಾರಿ ಜಾನ್ ಮಿಸ್ಕಿತ್ ಅವರ ಜೊತೆ ಚರ್ಚಿಸಿದರು. ಇದೇ ವೇಳೆ ಕಚೇರಿ ಕೆಲಸಗಳಿಗೆ ಬಂದಿದ್ದ ಸಾರ್ವಜನಿಕರ ಜೊತೆಯೂ ಸಮಸ್ಯೆಗಳ ಬಗ್ಗೆ ಆಲಿಸಿದರು.
ಬಳಿಕ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಇರಾ ಗ್ರಾ ಪಂ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಝುಬೈರ್ ಕೋಟೆಕಣಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
0 comments:
Post a Comment