ಎಲ್ಲ ನೋಂದಾಯಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಿ : ಅಳಿಕೆಯಲ್ಲಿ ಕಾರ್ಮಿಕರ ಸಭೆ ಆಗ್ರಹ  - Karavali Times ಎಲ್ಲ ನೋಂದಾಯಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಿ : ಅಳಿಕೆಯಲ್ಲಿ ಕಾರ್ಮಿಕರ ಸಭೆ ಆಗ್ರಹ  - Karavali Times

728x90

5 September 2021

ಎಲ್ಲ ನೋಂದಾಯಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಿ : ಅಳಿಕೆಯಲ್ಲಿ ಕಾರ್ಮಿಕರ ಸಭೆ ಆಗ್ರಹ 

 ಬಂಟ್ವಾಳ, ಸೆಪ್ಟೆಂಬರ್ 05, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ 3,000/- ರೂಪಾಯಿ ಕಲ್ಯಾಣ ಮಂಡಳಿಯಿಂದ ನೀಡಲು ಆದೇಶವಾಗಿದ್ದರೂ ಪರಿಹಾರ ಹಣ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು, ಹೆಚ್ಚಿನ ನೋಂದಾಯಿತ ಕಾರ್ಮಿಕರಿಗೆ ಸಿಗದೆ ಅನ್ಯಾಯವಾಗಿದೆ. ಅಲ್ಲದೆ ಕಲ್ಯಾಣ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿದ್ದು ಅದೂ ಕೂಡಾ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಲ್ಲಿ ಮದ್ಯ ಪ್ರವೇಶಿಸಿ ತಮ್ಮ ಬೆಂಬಲಿಗರಿಗೆ ಮಾತ್ರ ಆಹಾರ ಕಿಟ್ ವಿತರಿಸಿ ನಿಜವಾದ ನೋಂದಾಯಿತ ಕಾರ್ಮಿಕರಿಗೆ ಅನ್ಯಾಯವೆಸಗಿದ್ದಾರೆ. ಕೂಡಲೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ಹಾಗೂ ಆಹಾರ ಕಿಟ್ ಗಳನ್ನು ವಿತರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ವತಿಯಿಂದ ಅಳಿಕೆಯಲ್ಲಿ ಕಟ್ಟಡ ಕಾರ್ಮಿಕರ ಸಮಿತಿ ರಚನಾ ಸಭೆ ನಡೆಯಿತು. ಸ

ಸಭೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಭಾಗವಹಿಸಿ ಮಾತನಾಡಿ ಸಂಘಟನೆಗಳ ಹೋರಾಟದಿಂದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದ್ದು. ಈಗ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು. 

 ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಲಿಯಾಕತ್ ಖಾನ್, ರಾಜೀವ ಭಾಗವಹಿಸಿದ್ದರು. 

 ಇದೇ ವೇಳೆ ನೂತನ ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಜಿನ್ನಪ್ಪ ಗೌಡ, ಉಪಾದ್ಯಕ್ಷರುಗಳಾಗಿ ಗೋಪಾಲ ಬೀಮಾರ್, ಚಂದ್ರಶೇಖರ ಆಚಾರ್ಯ ಎರುಂಬು, ಕಾರ್ಯದರ್ಶಿಯಾಗಿ ಉದಯ ದೂಜೆಮಾರ್, ಜೊತೆ ಕಾರ್ಯದರ್ಶಿಗಳಾಗಿ ಶಶಿದರ್, ರಮೇಶ್ ನಾಯ್ಕ ನೆಗಳಗುಳಿ, ಕೋಶಾಧಿಕಾರಿಗಳಾಗಿ ಸುರೇಶ್ ಕುಲಾಲ್ ಎರುಂಬು ಸಹಿತ 20 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಎಲ್ಲ ನೋಂದಾಯಿತ ಕಾರ್ಮಿಕರಿಗೂ ಸೌಲಭ್ಯ ಒದಗಿಸಿ : ಅಳಿಕೆಯಲ್ಲಿ ಕಾರ್ಮಿಕರ ಸಭೆ ಆಗ್ರಹ  Rating: 5 Reviewed By: karavali Times
Scroll to Top