ಮೈಸೂರು : ದೇವಸ್ಥಾನ ತೆರವು ವಿರುದ್ದ ಪ್ರತಿಭಟನೆ ವೇಳೆ ಹಲ್ಲೆಗೊಳಗಾದ ಪತ್ರಕರ್ತರ ಭೇಟಿಯಾದ ಅಝೀಂ ಅಲಿ ಶಾ ಚಿಶ್ತಿ  - Karavali Times ಮೈಸೂರು : ದೇವಸ್ಥಾನ ತೆರವು ವಿರುದ್ದ ಪ್ರತಿಭಟನೆ ವೇಳೆ ಹಲ್ಲೆಗೊಳಗಾದ ಪತ್ರಕರ್ತರ ಭೇಟಿಯಾದ ಅಝೀಂ ಅಲಿ ಶಾ ಚಿಶ್ತಿ  - Karavali Times

728x90

19 September 2021

ಮೈಸೂರು : ದೇವಸ್ಥಾನ ತೆರವು ವಿರುದ್ದ ಪ್ರತಿಭಟನೆ ವೇಳೆ ಹಲ್ಲೆಗೊಳಗಾದ ಪತ್ರಕರ್ತರ ಭೇಟಿಯಾದ ಅಝೀಂ ಅಲಿ ಶಾ ಚಿಶ್ತಿ 

 ಮೈಸೂರು, ಸೆಪ್ಟೆಂಬರ್ 19, 2021 (ಕರಾವಳಿ ಟೈಮ್ಸ್) : ದೇವಸ್ಥಾನ ತೆರವು ಕಾರ್ಯಾಚರಣೆ ವಿರೋಧಿಸಿ ಗುರುವಾರ ನಗರದಲ್ಲಿ ಪರಿವಾರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೌಸರ್ ನ್ಯೂಸ್ ಉರ್ದು ದೈನಿಕ ಹಾಗೂ ವಿದ್ಯುನ್ಮಾನ ಮಾಧ್ಯಮದ ಪ್ರಧಾನ ಸಂಪಾದಕ ಮೊಹಮ್ಮದ್ ಸಪ್ಧಾರ್ ಖೈಸರ್ ಹಾಗೂ ಕ್ಯಾಮೆರಾಮೆನ್ ರಿಯಾಝುರ್ರಹ್ಮಾನ್ ಅವರನ್ನು ಸೂಫಿ ಮತ್ತು ಶರಣ ಸಂತರ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಹಿಂ

ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರ ಹೇಳಿಕೆಯನ್ನು ರೆಕಾರ್ಡಿಂಗ್ ಮಾಡುತ್ತಿದ್ದ ವೇಳೆ ಕೌಸರ್ ನ್ಯೂಸ್ ಪ್ರಧಾನ ಸಂಪಾದಕ ಮೊಹಮ್ಮದ್ ಸಪ್ಧಾರ್ ಖೈಸರ್ ಹಾಗೂ ಕ್ಯಾಮೆರಾಮೆನ್ ರಿಯಾಝುರ್ರಹ್ಮಾನ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. 

ಪ್ರತಿಭಟನೆಯನ್ನು ರೆಕಾರ್ಡ್ ಮಾಡಿಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಘಟನೆ ಕಾರ್ಯಕರ್ತರು, ವಿಡಿಯೋವನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಪತ್ರಕರ್ತ ಎಂದು ಹೇಳಿದ್ದರೂ ಪೊಲೀಸರ ಸಮ್ಮುಖದಲ್ಲಿಯೇ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿತ್ತು. ಬಳಿಕ ಮಧ್ಯಪ್ರವೇಶಿಸಿದ್ದ ಪೊಲೀಸರು ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿ ಇರುವ ಕೋಣೆಗೆ ಪತ್ರಕರ್ತರನ್ನು ಕರೆತಂದು ರಕ್ಷಣೆ ನೀಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮೈಸೂರು : ದೇವಸ್ಥಾನ ತೆರವು ವಿರುದ್ದ ಪ್ರತಿಭಟನೆ ವೇಳೆ ಹಲ್ಲೆಗೊಳಗಾದ ಪತ್ರಕರ್ತರ ಭೇಟಿಯಾದ ಅಝೀಂ ಅಲಿ ಶಾ ಚಿಶ್ತಿ  Rating: 5 Reviewed By: karavali Times
Scroll to Top