ಮಂಗಳೂರು : ಅಂಚೆ ಇಲಾಖೆಯಿಂದ ರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವ ರಾವ್ ಅವರ ಅಂಚೆ ಲಕೋಟೆ ಬಿಡುಗಡೆ - Karavali Times ಮಂಗಳೂರು : ಅಂಚೆ ಇಲಾಖೆಯಿಂದ ರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವ ರಾವ್ ಅವರ ಅಂಚೆ ಲಕೋಟೆ ಬಿಡುಗಡೆ - Karavali Times

728x90

13 October 2021

ಮಂಗಳೂರು : ಅಂಚೆ ಇಲಾಖೆಯಿಂದ ರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವ ರಾವ್ ಅವರ ಅಂಚೆ ಲಕೋಟೆ ಬಿಡುಗಡೆ

ಮಂಗಳೂರು, ಅಕ್ಟೋಬರ್ 13, 2021 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಅಂಚೆ ಸಪ್ತಾಹ ಫಿಲಾಟೆಲಿ ದಿನದ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರಾದ ವೀರ ರಾಣಿ ಅಬ್ಬಕ್ಕ ಹಾಗೂ ಕಾರ್ನಾಡ್ ಸದಾಶಿವ ರಾವ್ ಅವರ ವಿಶೇಷ ಅಂಚೆ ಲಕೋಟೆಗಳನ್ನು ಉಳ್ಳಾಲ ಅಂಚೆ ಕಚೇರಿಯಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು. 

ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಡಾ ಏಂಜಲ್ ರಾಜ್ ಅವರು ಲಕೋಟೆ ಬಿಡುಗಡೆಗೊಳಿಸಿದರು. ಮಂಗಳೂರು ಶಾಸಕ ಯು ಟಿ ಖಾದರ್, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಚೌಟ, ಬಿ ಸಿ ರೋಡು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ, ಉಳ್ಳಾಲ ನಗರಸಭಾಧ್ಯಕ್ಷೆ ಚಿತ್ರಕಲಾ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಅಂಚೆ ಇಲಾಖೆಯಿಂದ ರಾಣಿ ಅಬ್ಬಕ್ಕ, ಕಾರ್ನಾಡ್ ಸದಾಶಿವ ರಾವ್ ಅವರ ಅಂಚೆ ಲಕೋಟೆ ಬಿಡುಗಡೆ Rating: 5 Reviewed By: karavali Times
Scroll to Top