ಬಂಟ್ವಾಳದಲ್ಲಿ ಮುಂದುವರಿದ ಮಳೆ ಬಿರುಸು : ಕೆಲವೆಡೆ ಹಾನಿ - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆ ಬಿರುಸು : ಕೆಲವೆಡೆ ಹಾನಿ - Karavali Times

728x90

17 October 2021

ಬಂಟ್ವಾಳದಲ್ಲಿ ಮುಂದುವರಿದ ಮಳೆ ಬಿರುಸು : ಕೆಲವೆಡೆ ಹಾನಿ

ಬಂಟ್ವಾಳ, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಉಂಟಾಗಿ ಅಕ್ಷರಶಃ  ಜಲಪ್ರವಾಹವೇ ಉಂಟಾಗಿದ್ದು, ಇದರ ಸೈಡ್ ಎಫೆಕ್ಟ್ ಎಂಬಂತೆ ಬಂಟ್ವಾಳ ತಾಲೂಕಿನಾದ್ಯಂತ ಒಂದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆ ತೀವ್ರತೆಗೆ ಇರಾ ಗ್ರಾಮದ ನಿವಾಸಿ ಯಶೋಧ ಚಂದ್ರಶೇಖರ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಅದೇ ರೀತಿ ಬಡಗಬೆಳ್ಳೂರು ಗ್ರಾಮದ ಸುಂದರ ದೇವಾಡಿಗ ಆವರ ಮನೆಯ ಮುಂಭಾಗದ ಮಣ್ಣು ಕುಸಿದು ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಾಕೃತಿಕ ವಿಕೋಪ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆ ಬಿರುಸು : ಕೆಲವೆಡೆ ಹಾನಿ Rating: 5 Reviewed By: karavali Times
Scroll to Top