ಫೆಬ್ರವರಿ 28 ರಿಂದ ಮಾರ್ಚ್ 5 : ಉದ್ದಬೆಟ್ಟು ತ್ರೈವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ - Karavali Times ಫೆಬ್ರವರಿ 28 ರಿಂದ ಮಾರ್ಚ್ 5 : ಉದ್ದಬೆಟ್ಟು ತ್ರೈವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ - Karavali Times

728x90

25 February 2022

ಫೆಬ್ರವರಿ 28 ರಿಂದ ಮಾರ್ಚ್ 5 : ಉದ್ದಬೆಟ್ಟು ತ್ರೈವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ

ಮಂಗಳೂರು, ಫೆಬ್ರವರಿ 26, 2022 (ಕರಾವಳಿ ಟೈಮ್ಸ್) : ಮಲ್ಲೂರು-ಉದ್ದಬೆಟ್ಟು ಇತಿಹಾಸ ಪ್ರಸಿದ್ಧ ಸಯ್ಯಿದ್ ಹಸನ್ ಹೈದ್ರೋಸ್ ಜುಮಾ ಮಸೀದಿಯ ಸ್ಥಾಪಕ ಸಯ್ಯಿದ್ ಹಸನ್ ಹೈದ್ರೋಸ್ ತಂಙಳ್ (ಖ.ಸಿ) ಅವರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ 14ನೇ ತ್ರೈ ವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 28 ರಿಂದ ಮಾರ್ಚ್ 5ರವರೆಗೆ ನಡೆಯಲಿದೆ ಎಂದು ಉದ್ದಬೆಟ್ಟು ಮಸೀದಿ ಅಧ್ಯಕ್ಷ ಬಿ ನಿಝಾಮುದ್ದೀನ್ ತಿಳಿಸಿದರು. 

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ಫೆ 28 ರಂದು ಬೈಲುಪೇಟೆ ಜಮಾಲಿಯಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಉದ್ಘಾಟಿಸಲಿದ್ದು, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ದುಆ ನೆರವೇರಿಸುವರು. ಉದ್ದಬೆಟ್ಟು ಮಸೀದಿ ಅಧ್ಯಕ್ಷ ಬಿ ನಿಝಾಮುದ್ದೀನ್ ಅಧ್ಯಕ್ಷತೆ ವಹಿಸುವರು. ಮಸೀದಿ ಖತೀಬ್ ಮುಹಮ್ಮದ್ ಶರೀಫ್ ದಾರಿಮಿ ಮುಖ್ಯ ಭಾಷಣಗೈಯುವರು. ಅಬ್ದುಲ್ ಖಾದರ್ ಮುನವ್ವರಿ, ಮುಹಮ್ಮದ್ ಶರೀಫ್ ಫೈಝಿ, ಇಬ್ರಾಹಿಂ ಸಜಿಪ, ಎಂ ಮುಹಮ್ಮದ್ ಸೇರಿದಂತೆ ಮಸೀದಿ ಪದಾಧಿಕಾರಿಗಳು ಉಪಸ್ಥಿತರಿರುವರು. 

ಮಾ 1 ರಂದು ಉಡುಪಿ ಖಾಝಿ ಶೈಖುನಾ ಮಾಣಿ ಉಸ್ತಾದ್ ದುಆ ನೆರವೇರಿಸಲಿದ್ದು, ರಫೀಖ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣಗೈಯುವರು. ಮಾ 2 ರಂದು ಡಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುಆ ನೆರವೇರಿಸಲಿದ್ದು, ಅಶ್ರಫ್ ರಹ್ಮಾನಿ ಚೌಕಿ-ಕಾಸರಗೋಡು ಮುಖ್ಯ ಭಾಷಣಗೈಯುವರು. 

ಮಾ 3 ರಂದು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ನಜ್ಮುದ್ದೀನ್ ಪೂಕೋಯ ತಂಞಳ್ ಅಲ್-ಹೈದ್ರೋಸಿ ಅಧ್ಯಕ್ಷತೆ ವಹಿಸುವರು. ಅಶ್ಫಾಕ್ ಫೈಝಿ ನಂದಾವರ ಮುಖ್ಯ ಭಾಷಣಗೈಯುವರು. ಮಾ 4 ರಂದು ಸಂಜೆ 6.30ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ಉತ್ತರ  ಶಾಸಕ ಡಾ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಅಹ್ಮದ್ ನಈಮ್ ಮುಕ್ವೆ ಸೌಹಾರ್ದ ಸಂದೇಶ ನೀಡುವರು. ರಾಜ್ಯ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಮಲ್ಲೂರು ಗ್ರಾ ಪಂ ಅಧ್ಯಕ್ಷ ಇಸ್ಮಾಯಿಲ್ ಎಂಇ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 8.30 ಕ್ಕೆ ಸಯ್ಯಿದ್ ಶರಫುದ್ದೀನ್ ತಂಙಳ್ ಗಾಂಧಿನಗರ ದುಆ ನೆರವೇರಿಸಲಿದ್ದು, ಖಲೀಲ್ ಹುದವಿ ಕಾಸರಗೋಡು ಮುಖ್ಯ ಭಾಷಣಗೈಯುವರು ಎಂದರು. 

ಮಾ 5 ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯಿದ್ ಆಲೀ ತಂಙಳ್ ಕುಂಬೋಳ್ ದುಆ ನೆರವೇರಿಸಲಿದ್ದಾರೆ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಉದ್ಘಾಟಿಸುವರು. ಎಸ್ ಕೆ ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಮುಖ್ಯ ಭಾಷಣಗೈಯುವರು. 

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೆಯರ್‍ಮೆನ್ ಶಾಫಿ ಸಅದಿ, ವಿಧಾನ ಪರಿಷತ್ ಸದಸ್ಯ ಹಾಜಿ ಬಿ ಎಂ ಫಾರೂಕ್, ಪ್ರಮುಖರಾದ ಭಾಷಾ ತಂಙಳ್, ಹಾಜಿ ಅಬ್ದುಲ್ ಸತ್ತಾರ್ ಚಿಕ್ಕಮಗಳೂರು, ಹಾಜಿ ಅಬ್ದುಲ್ ರಹಿಮಾನ್ ಹಾಸ್ಕೋ ಮೂಡಬಿದ್ರೆ, ಮುಹಮ್ಮದ್ ಹನೀಫ್ ಸೆಂಟ್ರಲ್ ಕಮಿಟಿ, ಹಾಜಿ ಅಬ್ದುಲ್ ರಝಾಕ್, ನೌಶಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಸ್ಥಳೀಯ ಮಸ್ಜಿದ್ ಖತೀಬರು, ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು. 

ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಯು.ಉಮರಬ್ಬ, ಜೊತೆ ಕಾರ್ಯದರ್ಶಿ ಸುಹೈಲ್ ಉದ್ದಬೆಟ್ಟು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 28 ರಿಂದ ಮಾರ್ಚ್ 5 : ಉದ್ದಬೆಟ್ಟು ತ್ರೈವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ Rating: 5 Reviewed By: karavali Times
Scroll to Top